ತುರುವೇಕೆರೆ:
ಬಿಜೆಪಿ ಜೊತೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ಮಾಜಿ ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಹಾಲಿ ಹಾಗು ಮಾಜಿ ಶಾಸಕರಿಬ್ಬರು ಒಂದಾಗಿದ್ದಾರೆ ಎಂಬ ಮಾತುಗಳು ಕೆಲವರ ಬಾಯಲ್ಲಿ ಕೇಳಿ ಬರುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ಜೆಡಿಎಸ್ ಹಾಗು ಬಿಜೆಪಿ ಎಣ್ಣೆ ಸೀಗೆಕಾಯಿ ಇದ್ದಂತೆ. ನಮ್ಮ ಪಕ್ಷಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಇಂತಹ ಹೇಳಿಕೆ ನೀಡುತ್ತಿದ್ದು ತಾಲ್ಲೂಕಿನ ಜನತೆ ಅನ್ಯತಾ ಬಾವಿಸಬೇಡಿ ಎಂದರಲ್ಲದೆ ತು.ಜಿ.ಹಾ.ಉ. ಒಕ್ಕೂಟ ನಿರ್ಧೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಮಹಲಿಂಗಯ್ಯ ಗೆಲುವು ಸಾದಿಸಿದ್ದಕ್ಕೆ ನಾನು ಸ್ವಾಗತಿಸುತ್ತೇನೆ ಎಂದರು.
ತಾಲ್ಲೂಕು ಕಛೇರಿಯಲ್ಲಿ ಅಧಿಕಾರಿಗಳು ಕೂಡಿ ಕೆಲಸ ಮಾಡುತ್ತಿಲ್ಲ. ವಿನಾ ಕಾರಣ ರೈತರನ್ನು ಅಲೆಸುತ್ತಿದ್ದಾರೆ. ತಹಶೀಲ್ದಾರ್ ಹಾಗು ಇ ಓ ಇತ್ತ ಗಮನ ಹರಿಸಿ ರೈತರಿಗೆ ಅನುವು ಮಾಡಿಕೊಡಲಿ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಆಡಳಿತ ಚೆನ್ನಾಗಿ ನಡೆಯುತ್ತಿದ್ದು ಅನೇಕ ಜನಪರ ಯೋಜನೆಗಳನ್ನು ನಮ್ಮ ಸರ್ಕಾರ ಕಾರ್ಯರೂಪಕ್ಕೆ ತಂದಿದೆ. ಸಮ್ಮಿಶ್ರ ಸರ್ಕಾರವಾದ್ದರಿಂದ ಕೆಲವು ತೀರ್ಮಾನಗಳನ್ನು ತಕ್ಷಣ ತೆಗೆದುಕೊಳ್ಳಲು ಸಾದ್ಯವಾಗುತ್ತಿಲ್ಲ. ಬಿಜೆಪಿ ಮಾಡಿದ ಅಪರೇಷನ್ ಕಮಲ ಈಗ ಅವರಿಗೇ ಮುಳುವಾಗಿದೆ. ಇದೇ 10 ರಂದು ತಾಲ್ಲೂಕಿನಲ್ಲಿ ಆಚರಿಸುವ ಟಿಪ್ಪು ಜಯಂತಿ ನಡೆಸಲು ನನ್ನ ಸಂಪೂರ್ಣ ಸಹಕಾರವಿದೆ ಎಂದರಲ್ಲದೆ ತಾಲ್ಲೂಕಿನಲ್ಲಿ ಮಳೆ ಬಾರದೆ ಬೆಳೆ ಹಾಳಾಗಿದ್ದು ಜನ ಸಂಕಷ್ಟದಲ್ಲಿದ್ದಾರೆ. ಆದಷ್ಟು ಬೇಗನೆ ತಾಲ್ಲೂಕಿನ ಎಲ್ಲ ಕೆರೆಕಟ್ಟೆಗಳನ್ನು ತುಂಬಿಸಲು ಜಿಲ್ಲಾಡಳಿತಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.
ಈ ಸಂಧರ್ಬದಲ್ಲಿ ಎಪಿಎಂಸಿ ಅಧ್ಯಕ್ಷ ರೇಣುಕಯ್ಯ, ನಿರ್ದೇಶಕ ನರಸಿಂಹರಾಜು, ಮುಖಂಡರಾದ ವೆಂಕಟೇಶ್ಮೂರ್ತಿ, ಸಿದ್ದಗಂಗಯ್ಯ, ಬಾಬು, ರವಿಕುಮಾರ್, ಜೈಗಿರಿಸುಂದರ್, ಅಫ್ಜಲ್, ಶಿವಾನಂದ್, ರಾಜೀವ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
