ಜಮ್ಮು 
ಭಾರತ ಪಾಕ್ ಗಡಿಯಾಗಿರುವ ಅಟ್ಟಾರಿ- ವಾಘಾದಲ್ಲಿ ವಿಶೇಷ ಸಂದರ್ಭದಲ್ಲಿ ಸಿಹಿ ಹಂಚುವುದು ಸಾಂಪ್ರದಾಯ ಆದರೆ ಈ ಬಾರಿಯ ಬಕ್ರಿದ್ ಗೆ ಭಾರತದ ಕಡೆಯಿಂದ ನೀಡಿದ ಸಿಹಿಯನ್ನು ಪಾಕ್ ಗಡಿ ಭದ್ರತಾ ಪಡೆಯವರು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಾರಿಯ ಈದ್ ಹಬ್ಬದ ವೇಳೆ ಸಿಹಿ ತಿಂಡಿಯಾಗಲಿ ಅಥವಾ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವುದಿಲ್ಲ ಎಂದು ಪಾಕ್ ರೇಂಜರ್ಸ್ ತಿಳಿಸಿರುವುದಾಗಿ ಬಿಎಸ್ ಎಫ್ ನ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಬಿಎಸ್ ರಾವತ್ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡುತ್ತ ತಿಳಿಸಿರುವುದಾಗಿ ವರದಿ ವಿವರಿಸಿದೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿ, ರಾಜ್ಯವನ್ನು ಇಬ್ಭಾಗ ಮಾಡಿ, ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಭಾರತ ಸರಕಾರ ಘೋಷಿಸಿತ್ತು.ಘೋಷಣೆ ಬಳಿಕ ಪಾಕಿಸ್ತಾನ ಭಾರತದ ನಿರ್ಧಾರದ ವಿರುದ್ದ ಜಾಗತಿಕ ನ್ಯಾಯಾಲಯದ ಮೊರೆ ಹೋಗಿತ್ತು ಆದರೆ ಅಲ್ಲಿ ತೀರ್ಪು ಭಾರತದ ಪರ ಬಂದ ಕಾರಣ ಪಾಕ್ ಗೆ ಜಾಗತಿಕ ಮಟ್ಟದಲ್ಲಿ ಅವಮಾನವಾಗಿತ್ತು .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








