ದಲಿತರ ಮನೆಯಲ್ಲಿ ಶಾಸಕರ ಗ್ರಾಮ ವಾಸ್ತವ್ಯ

 ಶಿರಾ : 

      ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದ ರಾಮಣ್ಣ ಅವರ ಮನೆಯಲ್ಲಿ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಬುಧವಾರ ಗ್ರಾಮ ವಾಸ್ತವ್ಯ ನಡೆಸಿದರು.

      ಚಿಕ್ಕನಹಳ್ಳಿ ಗ್ರಾಪಂ ಕಛೇರಿಗೆ ಭೇಟಿ ನೀಡಿದ ಶಾಸಕರು ಗ್ರಾಮದ ಅಭಿವೃದ್ಧಿಯಷ್ಟೇ ಅಲ್ಲದೆ ಪಂಚಾಯ್ತಿಯ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಪಡೆದರು. ಎರಡು ಗಂಟೆಗಳವರೆಗೆ ವಿವಿಧ ಗ್ರಾಮಗಳ ಗ್ರಾಮಸ್ಥರೊಂದಿಗೆ ಪಂಚಾಯ್ತಿ ಅಭಿವೃದ್ಧಿ ಕುರಿತು ಚರ್ಚಿಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ನಂತರ ದಲಿತ ಕುಟುಂಬಗಳನ್ನು ಭೇಟಿ ಮಾಡಿ ರಾಮಣ್ಣ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದರು.

     ಗ್ರಾ. ಬಿ.ಜೆ.ಪಿ. ಅಧ್ಯಕ್ಷ ರಂಗಸ್ವಾಮಿ, ನಗರ ಘಟಕದ ಅಧ್ಯಕ್ಷ ವಿಜಯರಾಜ್, ಮುದಿಮಡು ಮಂಜುನಾಥ್, ಮಾಲಿ ಸಿ.ಎಲ್.ಗೌಡ, ಮದಲೂರು ಮೂರ್ತಿ, ತರೂರು ರಮೇಶ್, ಮಧು, ಗ್ರಾ.ಪಂ. ಅಧ್ಯಕ್ಷ ನಟರಾಜು, ಉಪಾಧ್ಯಕ್ಷರಾದ ಸರೋಜಮ್ಮ, ಸದಸ್ಯರಾದ ಉಮೇಶ್, ಕಾವೇರಮ್ಮ, ವಸಂತಕುಮಾರಿ, ಅರುಣ್, ಲೋಕೇಶ್, ಉಮೇಶ್, ಜಯಲಕ್ಷ್ಮೀ. ಕಿರಣ್, ಧರ್ಮಣ್ಣ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link