ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್!

ಬೆಂಗಳೂರು:

     ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಪುಟ ರಚನೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಸಚಿವ ಸಂಪುಟ ರಚನೆಗೆ ಮುಹೂರ್ತ ಫಿಕ್ಸ್ ಆಗಿದೆ.

     ಆಗಸ್ಟ್ 19ಕ್ಕೆ ಸಚಿವ ಸಂಪುಟ ರಚನೆಗೆ ಬಿಎಸ್‍ವೈ ಅವರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಆಗಸ್ಟ್ 19 ರ ಸೋಮವಾರದಂದು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಇಲ್ಲ.  ಅನರ್ಹ ಶಾಸಕರನ್ನ ಕೈಬಿಡುವುದು ಬೇಡ ಎಂಬ ಸಂದೇಶ ಈಗಾಗಲೇ ರವಾನೆಯಾಗಿದೆ. ಈ ಮೂಲಕ 17 ಸಚಿವ ಸ್ಥಾನ ಉಳಿಸಿಕೊಂಡರೆ ಅನರ್ಹರಿಗೆ ವಿಶ್ವಾಸ ತುಂಬಿದಂತೆ ಆಗುತ್ತದೆ. ಹೀಗಾಗಿ ಪೂರ್ಣ ಪ್ರಮಾಣದ ಸಚಿವ ಸಂಪುಟ ಬೇಡ ಎಂದು ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಹೇಳಿದ್ದಾರೆ ಎನ್ನಲಾಗಿದೆ.

     ಆದ್ದರಿಂದ ಕೇವಲ 16 ಮಂದಿ ಮಾತ್ರ ಬಿಎಸ್‍ವೈ ಸಂಪುಟ ಸೇರಲು ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ 16 ಮಂದಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

      ದೆಹಲಿಯಲ್ಲಿ ಸಂಪುಟಕ್ಕೆ ಯಾರು ಸೇರಬೇಕು ಅನ್ನೋದು ಡಿಸೈಡ್ ಆಗುತ್ತದೆ. ಪಟ್ಟಿ ತನ್ನಿ 16 ಶಾಸಕರಿಗೆ ಮಾತ್ರ ಸಚಿವರ ಭಾಗ್ಯ ಎಂದು ಹೈಕಮಾಂಡ್ ಹೇಳಿದ್ದು, ಇದೀಗ ಬಿಎಸ್‍ವೈ ಸಂಪುಟದಲ್ಲಿ ಯಾರೆಲ್ಲ ಸಚಿವರಾಗುತ್ತಾರೆ ಎಂಬ ಕುತೂಹಲ ಮೂಡಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap