ತಿಪಟೂರು :
ನಗರದ ಶಾರದಾನಗರದ ರೈಲ್ವೆ ನಿಲ್ದಾಣದ ಪಕ್ಕದಲ್ಲಿ ಸುಮಾರು ವರ್ಷಗಳಿಂದ ಸರಕಾರಿ ಜಮೀನಿನಲ್ಲಿ ಟೆಂಟ್ಗಳನ್ನು ನಿರ್ಮಿಸಿ ನೆಲೆಸಿರುವ 20ಕ್ಕೂ ಹೆಚ್ಚು ಕುಟುಂಬಗಳನ್ನು ಮಂಗಳವಾರ ಆರಕ್ಷಕರ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.
ಶಾರದನಗರದ ರೈಲ್ವೆ ನಿಲ್ದಾಣಕ್ಕೆ ಹೊಂದಕೊಂಡಂತೆ ಇದ್ದ ಗುಡಿಸಲುಗಳಿಂದ ರೈಲ್ವೆ ನಿಲ್ದಾಣಕ್ಕೆ ಸುತ್ತಿಕೊಂಡು ಬರಬೇಕಾಗಿತ್ತು. ಅದಲ್ಲದೇ ಸಾರ್ವಜನಿಕರು ಸಂಜೆಯಾದರೆ ಈ ಸ್ಥಳದಲ್ಲಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮ್ಮ ಗುಡಿಸಲು ಟೆಂಟ್ಗಳನ್ನು ತೆರವುಗೊಳಿಸುತ್ತಿದ್ದರೂ ಏನೂ ಅರಿಯದ ಮುಗ್ಧ ಮಕ್ಕಳು ತಮ್ಮ ಪಾಡಿಗೆ ತಾವು ಇದ್ದದ್ದು ಕಲ್ಲು ಹೃದಯದವರ ಮನವನ್ನೂ ಕಲಕುವಂತಿತ್ತು.
ಈ ಗುಡಿಸಲುಗಳಲ್ಲಿ ವಾಸಿಸುವವರಿಗೆ ಹಲವಾರು ಬಾರಿ ತೆರವುಗೊಳಿಸಿ ಎಂದು ಹೇಳಿದ್ದರು ನಿವಾಸಿಗಳು ತೆರುವುಗೊಳಿಸದೇ ಇರುವುದರಿಂದ ನಾವೇ ತೆರವುಗೊಳಿಸುತ್ತಿದ್ದೇವೆಂದು ತಹಸೀಲ್ದಾರ್ ಚಂದ್ರಶೇಖರ್ ತಿಳಿಸಿದರು.
ಒತ್ತುವರಿ ತೆರವು ಆರಂಭವೊ : ಉದಾಹರಣೆಯೊ :
ತಾಲ್ಲೂಕಿನಲ್ಲಿ ಕೆರೆಗಳು, ರಸ್ತೆಗಳು, ಸ್ಮಶಾನಗಳು, ಸರಕಾರಿ ಜಮೀನುಗಳು, ಸಿಎ ನಿವೇಶನಗಳು ಹೀಗೆ ವಿವಿಧ ಸರಕಾರಿ ಜಮೀನುಗಳು ಒತ್ತುವರಿಯಾಗಿದ್ದು ಇದೇ ರೀತಿ ಮುಂದೆಯೂ ಒತ್ತುವರಿ ತೆರವು ಕಾರ್ಯಗಳು ನಡೆಯುತ್ತವೆಯೋ ಇಲ್ಲ ಜನರ ಕಣ್ಣೊರೆಸುವಂತೆ ಈ ಕಾರ್ಯಕ್ರಮವನ್ನು ಮಾಡಿ ಪ್ರಭಾವಿಗಳನ್ನು ಹಾಗೆಯೇ ಬಿಡುತ್ತಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
