ಉಡುಪಿ:
ಆರೋಪಿಗಳ ಬಂಧನ ಆಗುವವರೆಗೂ ಲಾಡ್ಜ್ ನಿಂದ ತಮ್ಮನ ಮೃತದೇಹವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಸಂತೋಷ್ ಸಹೋದರ ಪ್ರಶಾಂತ್ ಪಾಟೀಲ್ ಹೇಳಿದರು.
ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಆಪ್ ಕಾರ್ಯಕರ್ತರ ಬಂಧನ
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ನಮಗೆ ನ್ಯಾಯ ಸಿಗಬೇಕು, ನ್ಯಾಯ ಸಿಗುವವರೆಗೆ ತಮ್ಮನ ಮೃತ ದೇಹವನ್ನು ಲಾಡ್ಜ್ ನಿಂದ ಮೃತದೇಹ ತೆಗೆದುಕೊಂಡು ಹೋಗುವುದಿಲ್ಲ.ನಾವು ಇಲಾಖೆಗೆ ತನಿಖೆಗೆ ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಇದುವರೆಗೆ ಆರೋಪಿಗಳ ಬಂಧನ ಆಗಿಲ್ಲ. ಇಲಾಖೆಯವರು ಕೂಡ ನಮಗೆ ಸಹಕಾರ ಕೊಟ್ಟು, ಆರೋಪಿಗಳನ್ನು ಬಂಧಿಸಬೇಕೆಂದರು.
15 ಸ್ಥಳಗಳಲ್ಲಿ ಜಲ ಸಂಗ್ರಹ, ಮೇ 8ರಂದು ಸಮಾವೇಶ, ನೀರಾವರಿ ಯೋಜನೆಗಳ ಜಾರಿಗೆ ಜೆಡಿಎಸ್ ಸಂಕಲ್ಪ
ಸಿಎಂ ಅವರಿಗೆ ಈಗಾಗಲೇ ಮನವಿ ಮಾಡಿದ್ದೇವೆ. ಇದುವರೆಗೆ ಯಾವ ಪ್ರತಿಕ್ರಿಯೆವೂ ಸರ್ಕಾರದಿಂದ ಬಂದಿಲ್ಲ. ನನ್ನ ತಮ್ಮ ಹೇಳಿದೆಲ್ಲವೂ ಸತ್ಯ. ಮಾಧ್ಯಮಗಳಿಗೆ ಸಿಕ್ಕ ಸಾಕ್ಷ್ಯಧಾರ ಸತ್ಯ. ತಮ್ಮನಿಗೆ ನ್ಯಾಯ ಸಿಗಬೇಕೆಂದರು.ಉಡುಪಿ ಶಾಂಭವಿ ಲಾಡ್ಜ್ ಎದುರು ಪತ್ತೆಯಾದ ಮೃತ ಸಂತೋಷ್ ಪಾಟೀಲ್ ಗೆ ಸಂಬಂಧಿಸಿದ ಕಾರಿನ ಪರಿಶೀಲನೆಯನ್ನು ಪೊಲೀಸರು ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
