ತುಮಕೂರು:
ರಾತ್ರಿವೇಳೆ ಡಾಬಾಗಳಲ್ಲಿ ಮದ್ಯ ಸೇವನೆ ಮಾಡಿ ಹಲ್ಲೆ ಪ್ರಕರಣಗಳು, ರಸ್ತೆ ಅಪಘಾತಗಳು ಸಂಭವಿಸಿ ಪ್ರಕರಣಗಳು ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಕೋನ ವಂಶಿಕೃಷ್ಣ ಅವರ ನೇತೃತ್ವದಲ್ಲಿ ಸೈಬರ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯವರು ನ.4 ರಂದು ರಾತ್ರಿ 9 ಗಂಟೆ ಸಮಯದಲ್ಲಿ ದಾಳಿ ನಡೆಸಿದ್ದಾರೆ.
ತುಮಕೂರು ನಗರ ವ್ಯಾಪ್ತಿಯ ಹಿರೇಹಳ್ಳಿ ರಿಂಗ್ ರಸ್ತೆ, ಯಲ್ಲಾಪುರ, ಗೆದ್ಲಹಳ್ಳಿ, ಊರುಕೆರೆ, ಹನುಮಂತಪುರ ಕಡೆಗಳಲ್ಲಿ ಇರುವ ಡಾಬಾಗಳಾದ ಪಾರ್ಕ್ ಇನ್ ಡಾಬಾ, ಹಳ್ಳಿಮನೆ ವರುಣ ಫ್ಯಾಮಿಲಿ ಡಾಬಾ, ಹಂಸ ಫ್ಯಾಮಿಲಿ ಡಾಬಾ, ಎಸ್.ಎಲ್.ವಿ. ಫ್ಯಾಮಿಲಿ ಡಾಬಾ, ಎಸ್.ಎಲ್.ಎನ್. ಫ್ಯಾಮಿಲಿ ಡಾಬಾ, ಆರ್.ಕೆ.ಡಾಬಾ, ಭರಣಿ ಡಾಬಾ, ನೂತನ ರಂಗನಾಥ ಡಾಬಾ, ಅನುಗ್ರಹ ಫ್ಯಾಮಿಲಿ ರೆಸ್ಟೋರೆಂಟ್ ಹಾಗೂ ರೇವತಿ ರೆಸ್ಟೋರೆಂಟ್ಗಳ ಮೇಲೆ ದಾಳಿ ನಡೆಸಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಕಲ್ಪಿಸಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಮೇಲ್ಕಂಡ ಡಾಬಾಗಳ ಮಾಲೀಕರುಗಳ ವಿರುದ್ಧ ತುಮಕೂರು ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ಕ್ರಮ ಜರುಗಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
