ಹುಳಿಯಾರು ಬಂದ್ ಸಂಪೂರ್ಣ ಯಶಸ್ವಿ..!

ಹುಳಿಯಾರು:

     ಹುಳಿಯಾರಿನ ಪೆಟ್ರೋಲ್ ಬಂಕ್ ಮುಂದಿನ ಸರ್ಕಲ್‍ಗೆ ಕನಕದಾಸ ವೃತ್ತ ಎಂದೇ ಮರು ನಾಮಕರಣ ಮಾಡುವಂತೆಯೂ ಹಾಗೂ ಸಚಿವ ಜೆ.ಸಿ.ಮಾಧುಸ್ವಾಮಿಯವರ ನಡವಳಿಕೆ ಮತ್ತು ಧೋರಣೆ ಖಂಡಿಸಿ ಕುರುಬರು ಹಾಗೂ ಗ್ರಾಮದ 18 ಕೋಮಿನ ಮುಖಂಡರು ಕರೆ ನೀಡಿದ್ದ ಹುಳಿಯಾರು ಬಂದ್ ಗುರುವಾರ ಸಂಪೂರ್ಣ ಯಶಸ್ವಿಯಾಯಿತು.

    ಅಂಗಡಿ ಮುಂಗ್ಗಟ್ಟುಗಳು, ಹೋಟೆಲ್ ಗಳನ್ನು ಸ್ವಯಂಪ್ರೇರಿತರಾಗಿ ಬಾಗಿಲು ಹಾಕುವ ಮುಖಾಂತರ ಹೋರಾಟಕ್ಕೆ ಕೈಜೋಡಿಸಿದರು. ಹುಳಿಯಾರಿನ ದುರ್ಗಮ್ಮ ದೇವಸ್ಥಾನದ 18 ಕೋಮಿನ ಕಮಿಟಿ ಬಂದ್‍ಗೆ ಸಾಥ್ ನೀಡಿದ್ದರಿಂದ ಯಾವುದೇ ವ್ಯಾಪಾರ ವ್ಯವಹಾರ ಜರುಗದೆ ಪಟ್ಟಣ ವ್ಯವಹಾರ ಬಹುತೇಕ ಸ್ತಬ್ಧವಾಗಿತ್ತು.

   ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮೆಡಿಕಲ್ ಸ್ಟೋರ್, ಆಸ್ಪತ್ರೆ, ಪೆಟ್ರೋಲ್ ಬಂಕ್ ಎಂದಿನಂತೆ ತೆರದಿತ್ತು. ಖಾಸಗಿ ಬಸ್‍ಗಳು, ಲಾರಿಗಳು, ರಸ್ತೆಗಿಳಿದಿದ್ದವಾದರೂ ಪ್ರಯಾಣಿಕರ ಓಡಾಟ ವಿರಳವಾಗಿತ್ತು.

    ಧರಣಿ ನಿರತರ ಪೊಲೀಸ್ ಸ್ಟೇಷನ್ ಬಳಿ ಬಂದು ಕನಕ ವೃತ್ತ ನಾಮಫಲಕ ಹಾಕುವಂತೆ ಪಟ್ಟು ಹಿಡಿದು ಹೈವೆ ರಸ್ತೆಯಲ್ಲಿ ಧರಣಿ ಕುಳಿತ ಪರಿಣಾಮ ಹುಳಿಯಾರು ಪಟ್ಟಣದಲ್ಲಿ ರಸ್ತೆಯಲ್ಲಿ ವಾಹನಗಳ ಸಂಚಾರ 3 ಗಂಟೆಗೂ ಹೆಚ್ಚು ಕಾಲ ಇಲ್ಲದಾಗಿತ್ತು .ರಾಷ್ಟ್ರೀಕೃತ ಬ್ಯಾಂಕುಗಳೂ, ಸರ್ಕಾರಿ ಕಚೇರಿ, ಎಪಿಎಂಸಿ ಅಂಚೆ ಕಛೇರಿಗಗಳು ಸಹ ಬಾಗಿಲು ಹಾಕಿ ಬಂದ್ ಬೆಂಬಲ ಸೂಚಿಸಿದ್ದವು. ಬಂದ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link