ಹುಳಿಯಾರು:
ಹುಳಿಯಾರಿನಲ್ಲಿ ನ್ಯಾಷನಲ್ ಹೈವೆ ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸಿರುವ ಚರಂಡಿಗಳ ಕಿಂಡಿಗಳನ್ನು ಮುಚ್ಚಿ ದುರ್ನಾತ ಬೀರುವುದನ್ನು ತಪ್ಪಿಸುವಂತೆ ಹುಳಿಯಾರಿನ ಹಿರಿಯ ವಕೀಲ ಎಚ್.ಎಂ.ಗುರುರಾಜ್ ಒತ್ತಾಯಿಸಿದ್ದಾರೆ.ಇಲ್ಲಿನ ಎಸ್ಎಲ್ಆರ್ ಬಂಕ್ನಿಂದ ಒಣಕಾಲುವೆಯವರೆವಿಗೆ ಹೈವೆ ರಸ್ತೆ ಅಭಿವೃದ್ಧಿ ಕಾಮಗಾರಿಯು ಕಳೆದ ಒಂದೂವರೆ ವರ್ಷಗಳಿಂದ ನಡೆಯುತ್ತಿದೆ. ಆದರೂ ಕಾಮಗಾರಿ ಪೂರ್ಣಗೊಳ್ಳದೆ ಕುಂಟುಂತ ಸಾಗುತ್ತಿದೆ. ಅಲ್ಲದೆ ಚರಂಡಿ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಿದ್ದಾರೆ ಎಂದರು ಆರೋಪಿಸಿದ್ದಾರೆ.
ಚರಂಡಿಯ ಅವೈಜ್ಞಾನಿಕ ಕಾಮಗಾರಿಯ ದುಷ್ಪರಿಣಾಮದ ಫಲವಾಗಿ ಎಲ್ಲಿರೂ ಚರಂಡಿ ನೀರು ಸರಾಗವಾಗಿ ಹರಿಯದೆ ಎಲೆಚಿದರಲ್ಲಿ ನಿಂತಿದೆ. ಅಲ್ಲದೆ ಈ ಚರಂಡಿಗೆ ಮನೆಯ ಶೌಚದ ಸಂಪರ್ಕ ಸೇರಿದಂತೆ ಬಚ್ಚಲ ನೀರು, ಹೋಟಲ್ ಮುಸುರೆ ಹೋಗಲು ಅವಕಾಶ ಕಲ್ಪಿಸಿದ್ದು ಈ ತ್ಯಾಜ್ಯ ಸರಾಗವಾಗಿ ಹರಿಯದೆ ಚರಂಡಿಯಲ್ಲಿ ನಿಂತಿದೆ.
ಹೀಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಶೌಚ ಹಾಗೂ ಕೊಳಚೆ ನೀರು ನಿಂತು ಈಗ ಚರಂಡಿ ಮೇಲೆ ನಿಲ್ಲಲಾಗದಷ್ಟು ದುರ್ನಾತ ಬೀರುತ್ತಿದೆ. ಜೊತೆಗೆ ಚರಂಡಿಯನ್ನು ವೈಜ್ಞಾನಿಕವಾಗಿ ಮುಚ್ಚದ ಪರಿಣಾಮ ಚರಂಡಿ ಪಕ್ಕದಲ್ಲಿರುವ ಅಂಗಡಿಗಳಿಗೆ, ಮನೆಯವರಿಗೆ ಚರಂಡಿಯ ದುರ್ನಾತ ರಾಚುತ್ತಿದೆ.
ಹಾಗಾಗಿ ಹೈವೆ ಎಂಜಿನಿಯರ್ ಅವರು ಖುದ್ದು ಚರಂಡಿಯ ಅವೈಜ್ಞಾನಿಕ ಕಾಮಗಾರಿಯನ್ನು ವೀಕ್ಷಿಸಿ ಚರಂಡಿ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಸೂಚನೆ ಕೊಡುವ ಜೊತೆಗೆ ಚರಂಡಿಯಲ್ಲಿನ ಕೊಳಚೆ ನೀರು ಸರಾಗವಾಗಿ ಹರಿಯುವಂತೆಯೂ ಮಾಡುವ ಜೊತೆಗೆ ಚರಂಡಿ ಕಿಂಟಿಗಳನ್ನು ಮುಚ್ಚಿ ದುರ್ನಾತ ತಪ್ಪಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
