ಕಪ್ಪು ಪಟ್ಟಿ ಧರಿಸಿ ಬೆಸ್ಕಾಂ ನೌಕರರ ಪ್ರತಿಭಟನೆ

ಹುಳಿಯಾರು

    ಪಟ್ಟಣದ ಬೆಸ್ಕಾಂ ಸಿಬ್ಬಂದಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಖಾಸಗೀಕರಣ ಧೋರಣೆ ಕೈ ಬಿಡುವುದು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

    ನೌಕರರು ಎಡ ತೋಳಿಗೆ ಕಪ್ಪುಪಟ್ಟಿ ಧರಿಸಿ ಸಾಂಕೇತಿಕ ಮುಷ್ಕರ ನಡೆಸಿದರು. ಗ್ರಾಹಕರು, ನೌಕರರು ಮತ್ತು ಜನರಿಗೆ ತೊಂದರೆ ಯಾಗಲಿದ್ದು ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರುವ ವಿಚಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.ಕೇಂದ್ರ ಸರ್ಕಾರವು ವಿದ್ಯುತ್ ಸುಧಾರಣೆಯ ನೂತನ ತಿದ್ದುಪಡಿ ಕಾಯ್ದೆಯು ಕಾರ್ಮಿಕ ವಿರೋಧಿಯಾಗಿದೆ. ಸಿಬ್ಬಂದಿಯ ಸ್ವಾತಂತ್ರ್ಯ ಕಿತ್ತುಕೊಳ್ಳಲಿದೆ. ಖಾಸಗಿ ಯವರ ಹಿಡಿತಕ್ಕೆ ಒಪ್ಪಿಸಲು ಹೊರಡುವ ಕೇಂದ್ರದ ನಡೆ ಅವೈಜ್ಞಾನಿಕ ಹಾಗೂ ನೌಕರರ ವಿರೋಧಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ವಿದ್ಯುತ್ ಕಾಯ್ದೆ ತಿದ್ದುಪಡಿ ಜಾರಿಯಾದರೆ ವಿದ್ಯುತ್ ಕ್ಷೇತ್ರ ಕೆಲವೇ ವ್ಯಕ್ತಿಗಳ ನಿಯಂತ್ರಣಕ್ಕೆ ಒಳಪಡುತ್ತದೆ, ದರ ನಿಗದಿ ವಿಷಯವೂ ಖಾಸಗಿಯವರ ಇಚ್ಛೆಯನ್ನು ಅವಲಂಬಿಸುತ್ತದೆ. ವಿದ್ಯುತ್ ಕ್ಷೇತ್ರವೂ ಕೂಡ ಬಿಎಸ್‍ಎನ್‍ಎಲ್ ಹಾದಿಯಲ್ಲಿ ಸಾಗುತ್ತದೆ. ಹಾಗಾಗಿ ಮಸೂದಗೆ ತಿದ್ದು ಪಡಿ ತರಬಾರದು ಎಂದು ಆಗ್ರಹಿಸಿದರು.ಬೆಸ್ಕಾಂ ಎಇಇ ಎನ್.ಬಿ.ಗವೀರಂಗಯ್ಯ, ಬೆಸ್ಕಾಂ ಶಾಖಾಧಿಕಾರಿ ಉಮೇಶ್‍ನಾಯ್ಕ, ಉಮೇಶ್, ಲೆಕ್ಕಾಧಿಕಾರಿ ಕೆ.ಪಿ.ಮಂಜು ಸೇರಿದಂತೆ ಅನೇಕ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link