ಮಾಜಿ ಸಚಿವ ಜಯಚಂದ್ರ ಟೆಂಪಲ್ ರನ್..!

ಹುಳಿಯಾರು

    ಶಿರಾ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾಗಲಿರುವ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರು ತಮ್ಮ ಹಳೇ ಕ್ಷೇತ್ರದಲ್ಲಿ ಟೆಂಪಲ್ ರನ್ ಆರಂಭಿಸಿದ್ದಾರೆ.

   ಶಿರಾ ಕ್ಷೇತ್ರಕ್ಕೆ ಶಿಫ್ಟ್ ಆಗುವ ಮೊದಲು ಜಯಚಂದ್ರ ಅವರು ಹುಳಿಯಾರು, ಬುಕ್ಕಾಪಟ್ಟಣ ಹೋಬಳಿಗಳನ್ನೊಳಗೊಂಡ ಕಳ್ಳಂಬೆಳ್ಳಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. ಈ ಕ್ಷೇತ್ರದಲ್ಲಿ 1978 ರಿಂದಲೂ 2004 ರವರೆವಿಗೂ 5 ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು, ಗೆಲುವು ಎರಡನ್ನೂ ಕಂಡಿದ್ದರು. ಕ್ಷೇತ್ರ ಮರುವಿಂಗಡನೆ ಬಳಿಗೆ ಶಿರಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಇವರು 2 ಚುನಾವಣೆಯಲ್ಲಿ ಗೆದ್ದು ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದರು.

   ಶಿರಾ ಕ್ಷೇತ್ರದಕ್ಕೆ ಶಿಫ್ಟ್ ಆಗಿದ್ದರೂ ಸಹ ಹಳೆ ಕ್ಷೇತ್ರವನ್ನು ಮರೆಯದ ಜಯಚಂದ್ರ ಅಧಿಕಾರ ಇರಲಿ ಬಿಡಲಿ ಆಗಾಗ ಇಲ್ಲಿಗೆ ಬಂದು ಹೋಗುತ್ತಿದ್ದರು. ಅದರಲ್ಲೂ ತಮ್ಮ ಮನೆ ದೇವರಾದ ಹುಳಿಯಾರು ಕೆಂಚಮ್ಮನ ದೇವಸ್ಥಾನಕ್ಕಂತೂ ತಪ್ಪದೆ ಕುಟುಂಬ ಸಹಿತ ಬರುತ್ತಿದ್ದರು. ಪ್ರತಿ ಚುನಾವಣೆಗೆ ಸ್ಪರ್ಧಿಸುವ ಮುನ್ನ ಕೆಂಚಮ್ಮ ದೇವಿ ದರ್ಶನ ಪಡೆದು ಹೋಗುವ ಸಂಪ್ರದಾಯ ರೂಢಿಸಿಕೊಂಡಿದ್ದರು.

    ಅದರಂತೆ, ಶಿರಾದಲ್ಲಿ ಸತ್ಯನಾರಾಯಣ್ ಅವರ ಅಕಾಲಿಕ ಮರಣದಿಂದ ತೆರವಾಗಿರುವ ಶಾಸಕ ಸ್ಥಾನಕ್ಕೆ ನಡೆಯುವ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ತಮ್ಮ ಹೆಸರು ಅಂತಿಮವಾಗುತ್ತಿದ್ದಂತೆ ಪತ್ನಿ ಸಮೇತ ಹುಳಿಯಾರಿನ ಕೆಂಚಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಆದರೆ ಈ ಬಾರಿ ವಿಶೇಷ ಎನ್ನುವಂತೆ ಇಲ್ಲಿನ ಕಾಳಿಕಮ್ಮಟೇಶ್ವರಿ, ಬೋರನಕಣಿವೆಯ ಸಾಯಿ ಮಂದಿರ, ಸಮೀಪದ ಬೆಲಗೂರು ಆಂಜನೇಯಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಿ.ಪಂ ಸದಸ್ಶ ವೈ.ಸಿ.ಸಿದ್ದರಾಮಯ್ಯ, ಆಚಾರ್ ರಮೇಶಣ್ಣ, ಕುಮಾರಣ್ಣ, ಕಾಂತರಾಜ್, ಕೆ.ಸಿ.ಶಿವಕುಮಾರ್, ಎಸ್‍ಆರ್‍ಎಸ್ ದಯಾನಂದ್, ಬಡಗಿ ರಾಮಣ್ಣ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap