ತಿಪಟೂರು : ಗುಂಡಿ ಮುಚ್ಚಿ ಫುಟ್‍ಪಾತ್ ಸುಗಮಗೊಳಿಸಿ

 ತಿಪಟೂರು : 

     ನಗರದ ಡಿ.ಸಿ.ಸಿ.ಬ್ಯಾಂಕ್ ಮುಂಭಾಗ ಇರುವ ನೀರಿನ ಪೈಪ್‍ಲೈನ್ ಹೊಡೆದು ನೀರು ಸೋರಿಕೆಯಾಗುತ್ತಿದೆ ಎಂಬ ಪತ್ರಿಕೆಯಲ್ಲಿ ವರದಿ ಬಂದ ತಕ್ಷಣವೇ ನಗರಸಭೆಯ ಅಧಿಕಾರಿಗಳು ಸ್ಪಂದಿಸಿ ಸಮಸ್ಯೆ ಸರಿ ಮಾಡಿದರು.

     ಈ ಗುಂಡಿಯನ್ನು ತೋಡಿ ಕುಡಿಯುವ ನೀರಿನ ಪೈಪ್‍ಲೈನ್ ದುರಸ್ತಿ ಮಾಡಿದ್ದು ಸರಿಯಾಗಿತ್ತು. ಆದರೆ ದುರಸ್ತಿ ಕಾರ್ಯಕ್ಕಾಗಿತೆಗೆದ ಗುಂಡಿಯನ್ನು ಹದಿನೈದು ದಿನಗಳು ಕಳೆದರೂ ಮುಚ್ಚದೇ ಪಾದಚಾರಿಗಳು ಓಡಾಡಲು ತುಂಬಾ ತೊಂದರೆಯಾಗಿದೆ. ಮೊದಲೇ ನಗರದಲ್ಲಿ ವಾಹನ ನಿಲುಗಡೆಗೆ ಸೂಕ್ತ ಸ್ಥಳವಿಲ್ಲದೇ ರಸ್ತೆಯ ಪಕ್ಕದಲ್ಲಿ ಎಲ್ಲಿಬೇಕೊ ಹಾಗೇ ವಾಹನಗಳನ್ನು ನಿಲ್ಲಿಸುವುದು ವಾಡಿಕೆಯಾಗಿದ್ದು ಇದ್ದ ಪಾದಚಾರಿ ಮಾರ್ಗದಲ್ಲಿ ಗುಂಡಿತೆಗೆದಿರುವುದು ಸಾರ್ವಜನಿಕರು, ಆಸ್ಪತ್ರೆಗೆ ಹೋಗುವ ರೋಗಿಗಳು, ವಿದ್ಯಾರ್ಥಿಗಳು ರಾಷ್ಟ್ರೀಯ ಹೆದ್ದಾರಿಗೆ ಇಳಿಯಬೇಕಾಗಿದ್ದು ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ ಆದ್ದರಿಂದ ಕೂಡಲೇ ಪೈಪ್‍ಲೈನ್ ರಿಪೇರಿಗೆ ತೆಗೆದಿರುವ ಗುಂಡಿಯನ್ನು ನಗರಸಭೆಯ ಅಧಿಕಾರಿಗಳು ಮುಚ್ಚಿ ಸಾರ್ವಜನಿಕರ ಓಡಾಡಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link