ಉತ್ತಮ ಮಳೆ : ಗರಿಗೆದರಿದ ಕೃಷಿ ಚಟುವಟಿಕೆ

ಮಧುಗಿರಿ:

ಉತ್ತಮ ಮಳೆಯಿಂದಾಗಿ ತಾಲ್ಲೂಕಿನ ಕೃಷಿ ಚಟುವಟಿಕೆ ಗರಿಗೆದರಿದೆ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.

ಅವರು ತಾಲ್ಲೂಕಿನ ಕಸಬಾ ವ್ಯಾಪ್ತಿಯ ಶಸ್ತ್ರಪಾಳ್ಯದಲ್ಲಿ ಕೆ.ಎನ್.ಆರ್ ಅವಧಿಯಲ್ಲಿ ನಿರ್ಮಿಸಿದ್ದ ಚೆಕ್ ಡ್ಯಾಂ ಸಮೀಪದಲ್ಲಿ ಮುಚ್ಚಿ ಹೋಗಿದ್ದ ಕಾಲುವೆಯನ್ನು ಅಭಿವೃದ್ಧಿ ಪಡಿಸಿ ಮಾತನಾಡಿದರು. ಈ ತಲಪರಿಗೆಯ ನೀರು ಸರಾಗವಾಗಿ ಹರಿಯುವಂತೆ ಮಾಡುವುದರಿಂದ ಕನಿಷ್ಠ ಎರಡರಿಂದ ಮೂರು ಬೆಳೆಯನ್ನು ಬೆಳೆಯಬಹುದಾಗಿದೆ.

ಗ್ರಾಮದ ಜನರು ನೀರಿನ ವಿಚಾರದಲ್ಲಿ ಯಾರೂ ಗಲಾಟೆ ಗೊಂದಲಗಳಿಗೆ ಅವಕಾಶ ಮಾಡಿಕೊಳ್ಳುವುದು ಬೇಡ. ಪಕ್ಷಾತೀತವಾಗಿ ನೀರನ್ನು ಹರಿಸಿಕೊಳ್ಳಿ. ಅಮರಾವತಿಯವರೆಗೆ ಕಾಲುವೆಯ ಮೂಲಕ ನೀರು ಹರಿಯಲಿದ್ದು, ಕಾಲುವೆ ಅಭಿವೃದ್ಧಿಗೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಅಭಿನಂದಿಸುವುದಾಗಿ ತಿಳಿಸಿದರು.

ವಿಧಾನ ಪರಿಷತ್ ಚುನಾವಣೆ :       ಕಾಂಗ್ರೆಸ್ ಮೊದಲ-ಬಿಜೆಪಿ ಎರಡನೆ ಸ್ಥಾನ

ರಾಜ್ಯದಲ್ಲಿ ಮತದಾರರು ಹೆಚ್ಚು ಕಾಂಗ್ರೆಸ್‍ನತ್ತ ಮುಖ ಮಾಡಿದ್ದು, ಸ್ಥಳೀಯ ಸಂಸ್ಥೆಗಳಲ್ಲಿ 500ಕ್ಕೂ ಅಧಿಕ ಸ್ಥಾನಗಳನ್ನು ಕಾಂಗ್ರೆಸ್ ಗಳಿಸಿದೆ. ಬಿಜೆಪಿ ಪಕ್ಷ ಎರಡನೇ ಸ್ಥಾನದಲ್ಲಿದ್ದು, ಜನರು ಬಿಜೆಪಿಯನ್ನು ವಿರೋಧಿಸ ತೊಡಗಿದ್ದಾರೆ.

ಮುಂದಿನ ದಿನ ಗಳಲ್ಲಿ ರಾಜ್ಯದಲ್ಲಿ ಬಹುತೇಕವಾಗಿ ಕಾಂಗ್ರೆಸ್ ಪಕ್ಷವು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜಾರಿಗೊಂಡ ಎತ್ತಿನಹೊಳೆ ಯೋಜನೆಯ ನೀರು ತಾಲ್ಲೂಕಿಗೂ ಹರಿಯಲಿದೆ.

ಎತ್ತಿನಹೊಳೆ ಯೊಜನೆಗೆ ಸರ್ಕಾರ 2500 ರಿಂದ 3000 ಕೋಟಿ ರೂ. ಮೀಸಲಿಡಬೇಕಾಗಿದೆ. ಆದರೆ ಕೇವಲ 500 ಕೋಟಿ ರೂ. ಮಾತ್ರ ಮೀಸಲಿಟ್ಟಿದ್ದರಿಂದ ಎತ್ತಿನಹೊಳೆ ಯೋಜನೆ ಮಂದಗತಿಯಲ್ಲಿ ಸಾಗಿದೆ. ತಾಲ್ಲೂಕಿಗೆ ಎತ್ತಿನಹೊಳೆ ನೀರು ಬರಬೇಕಾದರೆ ಕಾಂಗ್ರೆಸ್ ಪಕ್ಚ ಅಧಿಕಾರಕ್ಕೆ ಬರಬೇಕು. ಕೆಎನ್ ರಾಜಣ್ಣ ಶಾಸಕರಾಗಿ ಅಯ್ಜೆ ಆಗಬೇಕು. ಅವರು ಶಾಸಕರಾಗಿ ಆಯ್ಜೆ ಆದರೆ ಸಚಿವರಾಗುವುದು ಗ್ಯಾರಂಟಿ ಎಂದರು.

ಡಿ.ಹೆಚ್. ನಾಗರಾಜು ಮಾತನಾಡಿ, ಕೆ.ಎನ್. ರಾಜಣ್ಣನವರ ಅಧಿಕಾರಾವಧಿಯಲ್ಲಿ 2015 -16 ನೆ ಸಾಲಿನ ಅವಧಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ಇದು ಈ ಭಾಗದಲ್ಲಿ ವ್ಯವಸಾಯ ಚಟುವಟಿಕೆ ಆರಂಭಿಸಲು ಸಹಕಾರಿಯಾಗಿದೆ. ಈ ಭಾಗದಲ್ಲಿರುವ ಪ್ರತಿಯೊಬ್ಬ ರೈತರಿಗೂ ಸಾಲ ನೀಡಲಾಗುತ್ತಿದೆ.

ಇದುವರೆಗೂ 10 ಕೋಟಿ ರೂ. ಸಾಲ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 3 ಕೋಟಿ ರೂ. ಸಾಲ ನೀಡಲಾಗುವುದು. ಆದ್ದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜಣ್ಣರವರನ್ನು ಹಾಗೂ ಅದೇರೀತಿ ಮುಂದಿನ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ಬಿ.ನಾಗೇಶ್ ಬಾಬು, ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಡಿ.ಕೆ. ವೆಂಕಟೇಶ್, ಪುರಸಭಾ ಸದಸ್ಯ ಲಾಲಪೇಟೆ ಮಂಜುನಾಥ, ವಿಎಸ್‍ಎಸ್‍ಎನ್ ಅಧ್ಯಕ್ಷ ಫಾಜಿಲ್, ಪುರಸಭಾ ಮಾಜಿ ಅಧ್ಯಕ್ಷ ಎಮ್.ಕೆ. ನಂಜುಂಡಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ರಾಜಗೋಪಾಲ್, ನಾಗಾರ್ಜುನ,

ಗ್ರಾಪಂ ಅಧ್ಯಕ್ಷೆ ಭವ್ಯ ಕೇಶವಮೂರ್ತಿ, ಸಾವಿತ್ರಮ್ಮ ಡಿ.ಹೆಚ್ ನಾಗರಾಜು, ಎ.ಜೆ. ಗೋಪಾಲಯ್ಯ, ಪಂಚಾಕ್ಷರಯ್ಯ, ಉಪಾಧ್ಯಕ್ಷೆ ಚೇತನ, ಶಿವಕುಮಾರ್, ಗೌರಮ್ಮ, ರಾಮಾಂಜಿನಪ್ಪ ಸದಸ್ಯರುಗಳಾದ ವೀರೇಶ್, ನಾಗಭೂಷಣ, ಓಬಣ್ಣ, ರಾಮಚಂದ್ರ, ರಘು, ರಂಗರಾಜು, ದಾಸೇಗೌಡ, ಟಿವಿಎಸ್ ಮಂಜು, ಮುಖಂಡರಾದ ಹೆಚ್.ಎಸ್. ನಾಗರಾಜು, ಗಂಕಾರ್ ಚಿಕ್ಕರಾಮಯ್ಯ, ನೀರಗಂಟಿ ರಂಗರಾಜು, ಮೀಸೆ ನಾರಾಯಣಪ್ಪ,ಸೋಂಪುರ ರಂಗಪ್ಪ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link