ತುರುವೇಕೆರೆ:
ತಾಲೂಕಿನ ಕೋಳಘಟ್ಟ ಗ್ರಾಮದ ಬಳಿ ನೆಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಗಣಿಗಾರಿಕೆ ನೀತಿ ಉಲ್ಲಂಘನೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಹಾಗೂ ಕೌಶಾಲ್ಯ ಅಭಿವೃದ್ದಿ ಮಾಜಿ ಅಧ್ಯಕ್ಷ ಮುರುಳೀದರ್ ಹಾಲಪ್ಪ ತಿಳಿಸಿದರು.
ತಾಲೂಕಿನ ಕೋಳಘಟ್ಟ ಗ್ರಾಮದ ಬಳಿ ನೆಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ನಿಲ್ಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕೋಳಘಟ್ಟ ಗ್ರಾಮಸ್ಥರು ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಆಹೋ ರಾತ್ರಿ 4ನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಗುರುವಾರ ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ಮಾತನಾಡಿದ ಅವರು ಕೋಳಗಟ್ಟ ಬಳಿ ಗಣಿಗಾರಿಕೆ ಮಾಡಲು ಆದೇಶ ನೀಡಿರುವ ಸರ್ಕಾರ ಗಣಿಗಾರಿಕೆ ನೀತಿಯನ್ನು ಗಾಳಿಗೆ ತೂರಿದೆ.
ಗ್ರಾಮ ಪಂಚಾಯಿತಿ ಒಪ್ಪಿಗೆ ಇಲ್ಲ, ಗ್ರಾಮಸ್ಥರ ಒಪ್ಪಿಗೆ ಇಲ್ಲ ಏಕಾಏಕಿ ಗಣಿಗಾರಿಕೆ ಮಾಡಿ ರೈತರ ಜಮೀನು, ಬೆಳೆಗಳಿಗೆ ತೊಂದರೆ ಯಾಗಿದೆ ಎಂದರು.
ರೈತರು ಸುಮಾರು 21 ದಿನಗಳಿಂದ ತಮ್ಮ ಗ್ರಾಮದಲ್ಲಿ ಹಾಗೂ 4 ದಿನಗಳಿಂದ ತಾಲೂಕು ಕಚೇರಿ ಮುಂಬಾಗದಲ್ಲಿ ತಮ್ಮ ದನ ಕರುಗಳ ಜೊತೆ ಮಕ್ಕಳನ್ನು ಕೆರೆದುಕೊಂಡು ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಅಧಿಕಾರಿಗಳು ಮಾತ್ರ ಬೇಟಿ ನೀಡಿ ಬಗೆಹರಿಸುವ ಪ್ರಯತ್ನವನ್ನು ಮಾಡಿಲ್ಲ.
ರಾಜ್ಯದ ಭದ್ರಾವತಿ, ಕೋಲಾರದ ಚಿಂತಾಮಣಿ ಗಣಿಗಾರಿಕೆಯಲ್ಲಿ ಎಷ್ಟೊಂದು ಅನಾಹುತಗಳಾಗಿ ಸಾವು ಸಂಬವಿಸಿವೆ ಎಂಬುದು ಅರಿವು ಇಲ್ಲವೇ ಕೋಳಘಟ್ಟ ಗ್ರಾಮದಲ್ಲಿಯೂ ಸಹ ಅನಾಹುತಗಳಾದ ನಂತರ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬಹುದು. ಜಿಲ್ಲಾಡಳಿತ ಕೂಡಲೇ ಸೂಕ್ತ ನಿರ್ದಾರ ತೆಗೆದುಕೊಂಡು ಕಲ್ಲು ಗಣಿಗಾರಿಕೆ ನಿಲ್ಲಸಬೇಕು ಇಲ್ಲದಿದ್ದರೆ ಜಿಲ್ಲಾಧಿಕಾರಿ ಕಛೇರಿಗೆ ರೈತರೊಂದಿಗೆ ಮುತ್ತಿಗೆಹಾಕಿ ನಂತರ ವಿಧಾನ ಸೌದ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ವಿದಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು ಮಾತನಾಡಿ ಕಲ್ಲು ಗಣಿಗಾರಿಕೆ ಕೂಡಲೇ ನಿಲ್ಲಬೇಕು ಇಲ್ಲವಾದರೆ ನಾವು ತುರುವೇಕೆರೆ ಬಂದ್ಗೆ ಕರೆ ನೀಡುವ ಮೂಲಕ ಉಗ್ರವಾದ ಹೋರಾಟ ಕೈಗೊಳ್ಳಲಾಗುವುದು. ಇದಕ್ಕೆಲ್ಲ ತಾಲೂಕು ಹಾಗೂ ಜಿಲ್ಲಾಡಳಿತ ನೇರ ಹೊಣೆಯಗಲಿದೆ ಎಂದರು.
ಸ್ಥಳಕ್ಕೆ ಬೇಟಿ ನೀಡಿದ ಉಪವಿಭಾಗಾದಿಕಾರಿ ದಿಗ್ವಿಜಂiÀiಬೊಡ್ಕೆ ಧರಣಿ ನಿರತರೊಂದಿಗೆ ಮಾತನಾಡಿ ನಿಮಗೆ ಸೂಕ್ತ ಪರಿಹಾರ ನೀಡುತ್ತೇವೆ. ದರಣಿಯನ್ನು ಕೈಬಿಡಿ. ಕೆಲ ರೈತ ಮುಖಂಡರು ಬಂದು ನಮ್ಮೊಂದಿಗೆ ಸೂಕ್ತ ಚೆರ್ಚೆ ಮಾಡಿ ಎಂದು ಮನವಿ ಮಾಡಿಕೊಂಡರೂ ಸಹಾ ಪ್ರತಿಭಟನಾ ನಿರತರು ನಮಗೆ ಪರಿಹಾರ ಬೇಡ.
ಮೊದಲು ಕಲ್ಲು ಗಣಿಗಾರಿಕೆ ನಿಲ್ಲಿಸಿದ ನಂತರವೇ ಮಾತುಕತೆಯೆಂದು ಪಟ್ಟುಹಿಡಿದಾಗ ಉಪವಿಭಾಗಾಧಿಕಾರಿಗಳು ಅನ್ಯ ಮಾರ್ಗವಿಲ್ಲದೆ ಪ್ರತಿಭಟನಾ ಸ್ಥಳದಿಂದ ಹೊರನಡೆದರು.
ಶೌಚಾಲಯ ಬಂದ್ ಮಾಡಿದ ತಹಶೀಲ್ದಾರ್:
ದರಣಿ ನಿರತ ಮಹಿಳೆಯರಿಗೆ ಶೌಚಾಲಯದ ಸಮಸ್ಯೆ ಕಾಡತೊಡಗಿದೆ. ಕಳೆದ ಎರಡು ದಿನಗಳಿಂದ ತಾಲೂಕು ಕಚೇರಿಯಲ್ಲಿದ್ದ ಶೌಚಾಲಯ ಬಳಕೆ ಮಾಡುತ್ತಿದ್ದರು. ಆದರೆ ಗುರುವಾರ ಇದ್ದಕಿದ್ದಂತೆ ತಾಲೂಕು ಕಚೇರಿಯಲ್ಲಿದ್ದ ಶೌಚಾಲಯಕ್ಕೆ ಬೀಗ ಜಡಿದಿದ್ದು ಮಹಿಳೆಯರಿಗೆ ತೊಂದರೆಯಾಗಿದೆ.
ಶೌಚಾಲಯದ ಬೀಗ ತೆರವುಗೊಳಿಸಿ ಎಂದು ಕೇಳಿದರೆ ಇದು ತಾಲೂಕು ಕಚೇರಿಯ ನೌಕರರಿಗೆ ಮಾತ್ರ ಎಂದು ಹೇಳುತ್ತಾರೆ ತಹಶೀಲ್ದಾರ್ ಸಹ ಮಹಿಳೆಯಾಗಿದ್ದು ಮಹಿಳೆಯರ ಸಮಸ್ಯೆ ಸ್ಪಂದಿಸಲಿಲ್ಲ ಎಂದು ಮಹಿಳೆಯರು ತಿಳಿಸಿದ್ಧಾರೆ.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಶಂಕರಣ್ಣ, ತಾಳ್ಕೆರೆನಾಗೇಂದ್ರ, ಶ್ರೀನಿವಾಸ್ಗೌಡ, ಪ.ಪಂ.ಸದಸ್ಯ ಯಜಮಾನ್ಮಹೇಶ್, ಮುಖಂಡರಾದ ಚೌದರಿ ರಂಗಪ್ಪ, ರೇವಣಸಿದ್ದಯ್ಯ, ಧಾನಿಗೌಡ, ವಸಂತ್ಕುಮಾರ್, ಪ್ರಸನ್ನಕುಮಾರ್, ಮಂಜುನಾಥ್, ಸ್ವರ್ಣಕುಮಾರ್ ಗ್ರಾಮಸ್ಥರಾದ ಮಲ್ಲಿಕಾರ್ಜುನ್, ರೇಣುಕಪ್ಪ, ಯೋಗಾನಂದ್ ಸೇರಿದಂತೆ ಅನೇಕ ಮುಖಂಡರು, ರೈತರು ಹಾಗೂ ರೈತ ಮಹಿಳೆಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
