ದೇಶಕ್ಕೆ ತುಂಬಲಾರದ ನಷ್ಟವುಂಟಾಗಿದೆ: ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ

                    ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ನಿಧನನಿಂದ ದೇಶಕ್ಕೆ ತುಂಬಲಾರದ ನಷ್ಠ ಉಂಟಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.

                    ವಾಜಪೇಯಿಯವರು ಅಜಾತಶತೃ ಹಾಗೂ ಉತ್ತಮವಾಗ್ಮಿ ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ವೃದ್ದಿಗೆ ಶ್ರಮಿಸಿದ್ದರು. ಪ್ರಧಾನಿ ಆದ ಸಂದರ್ಭದಲ್ಲಿ ಪೋಕ್ರಾನ್ ಅಣುಬಾಂಬ್ ಸ್ಫೋಟಿಸಿ ಭಾರತದ ಪ್ರತಿಷ್ಠೆಯನ್ನು ಅಂತರರಾಷ್ಟ್ರೀಯ ಮತ್ತು ವಿದೇಶಗಳಲ್ಲಿ ಹೆಚ್ಚಿಸಿದ ಕೀರ್ತಿ ಅಟಲ್‍ಬಿಹಾರಿ ವಾಜಪೇಯಿಯವರಿಗೆ ಸಲ್ಲುತ್ತದೆ. ವಾಜಪೇಯಿರವರು ಸ್ವತಃ ಕವಿಯಾಗಿದ್ದರು, ಪಾರ್ಲಿಮೆಂಟ್‍ನಲ್ಲಿ ತಮ್ಮ ಪ್ರೌಢಿಮೆಯಿಂದ ಮಾಡುತ್ತಿದ್ದ ಭಾಷಣಕ್ಕೆ ನೆಹರೂ ಸಹ ಅವರ ಮಾತನ್ನು ಆಲಿಸುತ್ತಿದ್ದರು. ಇವರ ನಿಧನ ದೇಶಕ್ಕೆ ತುಂಬಲಾರದ ನಷ್ಠವಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಸಂತಾಪ ಸೂಚಿಸಿದ್ದಾರೆ.

Recent Articles

spot_img

Related Stories

Share via
Copy link