ಪಿ ಡಬ್ಲೂ ಡಿ ಇಲಾಖೆಯಿಂದ 65 ಲಕ್ಷರೂ ಅನುದಾನದ ಕಾಮಗಾರಿಗೆ ಚಾಲನೆ

ಕೊರಟಗೆರೆ:-
 
        ಗ್ರಾಮೀಣ ಪ್ರದೇಶಗಳಲ್ಲಿ ಹದಗೆಟ್ಟ ರಸ್ತೆಗಳಿಂದ ಸಾರ್ವಜನಿಕರ ಹಾಗೂ ವಿಧ್ಯಾರ್ಥಿಗಳಿಗೆ ಆಗುತ್ತಿದ್ದಂತಹ ಅನಾನುಕೂಲ ತಪ್ಪಿಸಲು ಪಿ ಡಬ್ಲೂ ಡಿ ಇಲಾಖೆಯಿಂದ 65 ಲಕ್ಷರೂಅನುದಾನದಕಾಮಗಾರಿಗೆ ಚಾಲನೆ ನೀಡಲಾಗಿದೆಎಂದುತುಮಕೂರು ಸಂಸದಎಸ್ ಪಿ ಮುದ್ದಹನುಮೇಗೌಡ ತಿಳಿಸಿದರು.
         
         ತಾಲೂಕಿನ ಕೋಳಾಲ ಹೋಬಳಿ ಪಾತಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಕೋಳಾಲ ಮುಖ್ಯರಸ್ತೆಯಿಂದ ಬೈರವೇಶ್ವರದೇವಾಲಯದ ವರೆಗಿನರಸ್ತೆಗೆ ಬುಧವಾರಗುದ್ದಲಿಪೂಜೆ ನೇರವೇರಿಸಿದ ನಂತರ ಮಾತನಾಡಿದರು.
 
         ಕೋಳಾಲ ಮಾರ್ಗದರಸ್ತೆಯಿಂದ ಬೈರಬೇಶ್ವರದೇವಾಲಯದ ತಿಮ್ಮನಾಯಕನಹಳ್ಳಿ ಮಾರ್ಗದ 2ಕೀಮೀ ರಸ್ತೆಗೆ 65ಲಕ್ಷ ವೆಚ್ಚ ದಡಾಂಬರೀಕರಣ ಮಾಡಿಸಲು ಯೋಜನೆ ರೂಪಿಸಲಾಗಿದೆ .ಇನ್ನೊಂದು ತಿಂಗಳಲ್ಲಿ ಬೈರಬೇಶ್ವರಜಾತ್ರೆಇರುವ ಹಿನ್ನಲೆಯಲ್ಲಿ ಅಷ್ಟರಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು . ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿ ಪೂರ್ಣ ಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸೂಚನೆ ನೀಡಿದರು.
 
        ಕಾರ್ಯಕ್ರಮದಲ್ಲಿ ಪಟ್ಟಾನಾಯಕನಹಳ್ಳಿ ಶ್ರೀಮಠದ ನಂಜಾವಧೂತ ಸ್ವಾಮೀಜಿ, ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ, ತಾಪಂ ಸದಸ್ಯ ಬೋರಣ್ಣ ಸೇರಿದಂತೆ ಸ್ಥಳೀಯ ಮುಖಂಡರುಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link