ಹೊನ್ನಾಳಿ
ತಾಲೂಕಿನ ಕೂಲಂಬಿ-ಕುಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದಲ್ಲಿ ಎನ್ನೆಸ್ಸೆಸ್ ಅಧಿಕಾರಿ ಮಂಜುನಾಥ್ ಐರಣಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಂಶುಪಾಲ ಎ.ಎಸ್. ಮಂಜಪ್ಪ, ಉಪನ್ಯಾಸಕರಾದ ಆರ್. ಭೀಮಾನಾಯ್ಕ, ರುದ್ರಪ್ಪ, ಕುಮಾರ್, ರವಿಕುಮಾರ್, ತಿಪ್ಪೇಸ್ವಾಮಿ, ಬಸವರಾಜಪ್ಪ, ಭುವನೇಶ್ವರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಎನ್. ಬಸವರಾಜಪ್ಪ, ಖಜಾಂಚಿ ಕೆ. ಉಮಾಪತಿ, ಸದಸ್ಯರಾದ ಬಿ.ಎಸ್. ಅಜ್ಜಪ್ಪ, ಬಿ.ಎಂ. ಲಿಂಗರಾಜು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








