ತುಮಕೂರು:
ಲೋಕಸಭಾ ಚುನಾವಾಣೆಯಲ್ಲಿ ಬಿಜೆಪಿ ಕುರುಬ ಸಮುದಾಯಕ್ಕೆ ಒಂದೇ ಒಂದು ಟೀಕೆಟ್ ನೀಡದೆ ಮೋಸಮಾಡಿದೆ ಎಂದು ಭಾರತಸೇವಾರತ್ನ ರಾಷ್ಟ್ರಪ್ರಶಸ್ತಿ ಪುರಸೃತರು ಹಾಗೂ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ. ಮಹಾಲಿಂಗಯ್ಯ ಆರೋಪಿಸಿದ್ದಾರೆ.
ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯು ಬಿಜೆಪಿ ಚುನಾವಣೆಯಲ್ಲಿ ಸ್ವರ್ಧಿಸಲು ಕುರುಬ ಸಮುದಾಯಕ್ಕೆ ಆವಕಾಶನೀಡದೆ ಇರುವುದು ಇಡೀ ಕುರುಬ ಸಮುದಾಯಕ್ಕೆ ಮಾಡಿದ ಅಪಮಾನವಾಗಿದೆ ಎಂದು ದೂರಿದ್ದಾರೆ. ರಾಜ್ಯದಲ್ಲಿ ಮೂರನೇ ಅತೀ ದೊಡ್ಡ ಸಮುದಾಯ ಎನಿಸಿಕೊಂಡಿರುವ ಕುರುಬಸಮುದಾಯವನ್ನು ಬಿಜೆಪಿ ನಿರ್ಲಕ್ಷ ಮಾಡಿದೆ. ಇದರ ವಿರುದ್ದ ಕುರುಬ ಸಮುದಾಯ ಜಾಗೃತಗೊಳ್ಳಬೇಕಾಗಿದೆ ಎಂದು ಎ. ಮಹಾಲಿಂಗಯ್ಯ ನವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
