ಗುಬ್ಬಿ
ಯುಗಾದಿ ಹಬ್ಬದ ಅಂಗವಾಗಿ ಪಟ್ಟಣದ ಮಾರುಕಟ್ಟೆಯಲ್ಲಿ ಹಣ್ಣು ಮತ್ತು ಹೂಗಳ ಮಾರಾಟ ಭರದಿಂದ ನಡೆಯಿತು. ಕನಕಾಂಬರ ಒಂದು ಮಾರು ಹೂವಿನ ಬೆಲೆ 150 ರಿಂದ 200 ರೂಗಳಾದರೆ ಇತರೆ ಹೂಗಳ ಬೆಲೆಯೂ ಹೆಚ್ಚಳವಾಗಿದೆ. ಇನ್ನು ಹಣ್ಣುಗಳ ಬೆಲೆಯೂ ಹೆಚ್ಚಾಗಿದ್ದು ವರ್ಷಕ್ಕೊಮ್ಮೆ ಬರುವ ಯುಗಾದಿ ಹಬ್ಬವನ್ನು ಸಂತಸದಿಂದ ಆಚರಿಸಲು ಬೆಲೆ ಹೆಚ್ಚಳವಾದರೂ ಲೆಕ್ಕಿಸದೆ ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ಧರಿಸುವ ಸಂಪ್ರಾದಾಯವಿದ್ದು ಪಟ್ಟಣದ ಪ್ರತಿಯೊಂದು ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ಖರೀದಿಯೂ ಭರದಿಂದ ನಡೆಯಿತು.
ಲೋಕಸಭಾ ಚುನಾವಣೆ ಭರಾಟೆಯಲ್ಲಿ ಹೊಸ ವರ್ಷದ ಯುಗಾದಿ ಹಬ್ಬವು ಸಹ ಕಳೆಗುಂದಿರುವಂತೆ ಕಾಣುತ್ತಿದೆ. ಬಹುತೇಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿ ಹಬ್ಬದಲ್ಲಿಯು ಸಾಕಷ್ಟು ಶುಭಾಷಯಗಳು ವಿಶೇಷವಾಗಿ ಕಂಡು ಬರುತ್ತಿತ್ತು. ಆದರೆ ಈ ಭಾರಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಯುಗಾದಿ ಹಬ್ಬಕ್ಕೆ ಅಂತಹ ಮನ್ನಣೆ ದೊರೆಯುತ್ತಿಲ್ಲ. ಬರಿ ಲೋಕಸಭೆಯ ಚುನಾವಣೆಯಲ್ಲಿ ಸಭೆಗಳಲ್ಲಿ ಮಾತನಾಡುವಂತಹ ಮಾತುಗಳು, ವಿಡಿಯೋಗಳು ರಾರಾಜಿಸುತ್ತಿವೆ.
ಚುನಾವಣಾ ಸಮರ ಎಲ್ಲೆಡೆ ಕಾಣುತ್ತಿರುವುದರಿಂದ ಹಬ್ಬಕ್ಕೆ ಅಂತಹ ಸಂಭ್ರಮ ಕಾಣುತಿಲ್ಲ. ಆದರೂ ಸಹ ಹಿಂದೂ ಸಂಪ್ರದಾಯದಂತೆ ಯುಗಾದಿಯೇ ಹೊಸ ವರ್ಷವಾಗಿರುವುದರಿಂದ ಭಾನುವಾರ ನಡೆಯಬೇಕಾಗಿದ್ದ ಗ್ರಾಮೀಣ ಸಂತೆಗಳು ಶುಕ್ರವಾರವೆ ನಡೆಯುತ್ತಿವೆ.
ಮಾರುಕಟ್ಟೆಯಲ್ಲಿ ಸಾರ್ವಜನಿಕರು ಹೂ, ಹಣ್ಣು, ಮಾವಿನ ಸೊಪ್ಪು, ಬೇವು, ಬೆಲ್ಲ ಖರೀದಿಯಲ್ಲಿ ಮುಂದಾಗಿದ್ದರು. ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಅಂತರ್ಜಲ ಕುಸಿತದಿಂದಾಗಿ ರೈತರು ಬೆಳೆದ ಹೂ ಮತ್ತು ತರಕಾರಿ ಬೆಲೆ ಹೆಚ್ಚಳವಾಗುತ್ತಿದೆ. ಬೇಸಿಗೆ ಯಾಗಿರುವುದರಿಂದ ಹೂ ಹೆಚ್ಚು ಮಾರುಕಟ್ಟೆಗೆ ಬಂದಿಲ್ಲ ನೀರಿನ ಸಮಸ್ಯೆ ಇರುವುದರಿಂದ ರೈತರು ಹೂ ಬೆಳೆಯಲು ಮುಂದಾಗಲ್ಲ. ಕೊಳವೆ ಬಾವಿ ಇದ್ದವರು ಮಾತ್ರ ಒಂದು ಅಥವಾ ಎರಡು ಮಡಿಗಳಲ್ಲಿ ಮಾತ್ರ ಹಾಕಿದ್ದಾರೆ. ಹಾಗಾಗಿ ಹೂವಿನ ಧರ ಜಾಸ್ತಿಯಾಗಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
