ಬರಗೂರು
ಬಯಲು ಸೀಮೆಗೆ ಸತತ ವರ್ಷಗಳಿಂದಲೂ ಸರಿಯಾಗಿ ಮಳೆಯಾಗದೆ ರಣ ಬಿಸಿಲಿಗೆ ಜನಜಾನುವಾರುಗಳು ಬಸವಳಿದಿದ್ದರು, ಮಂಗಳವಾರ ರಾತ್ರಿ ಬಿದ್ದ ಭರಣಿ ಮಳೆಯ ಆರ್ಭಟ ಜೋರಾಗಿ ಇಂದೇ ರಾತ್ರಿಗೆ ಕೃಷಿ ಹೊಂಡಗಳು ಕೆರೆಕಟ್ಟಗಳಿಗೆ ನೀರು ಬಂದು ಕೊಂಚ ಭೂಮಿ ತಂಪಗಿ ಧಗೆಯಿಂದ ನೆಮ್ಮದಿ ತಂದಿದೆ.
ಸಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಬರಗೂರಿನಲ್ಲಿ 94.02 ಮೀಲಿ ಮೀಟರ್ ಮಳೆ ದಾಖಲಾಗಿದೆ, ಬರಗೂರು, ಕಲ್ಲಹಳ್ಳಿ, ಗೋಣಿಹಳ್ಳಿ, ರಾಗಲಹಳ್ಳಿ ಹಂದಿಕುಂಟೆ ಹಾರೋಗೆರೆ ಗಂಡಿಹಳ್ಳಿ ವಿವಿಧ ಗ್ರಾಮಗಳಲ್ಲಿನ ಕೆರೆ ಕಟ್ಟೆಗಳಲ್ಲಿ ನೀರು ತುಂಬಿ ಅಂತರ್ಜಲ ಮಟ್ಟಕ್ಕೆ ಪುಷ್ಟಿ ನೀಡಿದಂತಾಗಿದೆ ಎನ್ನಲಾಗಿದೆ.ಹಿರಿಕರು ಹೇಳುಪ್ರಕಾರ ಭರಣಿ ಮಳೆ ಬಂದರೆ ರೈತರಿಗೆ ಉಳುಮೆ ಮಾಡಲು ಬೆಳೆ ಬೇಳೆಯಲು ಉತ್ತಮ ಫಸಲು ಕಾಣಲು ಉತ್ತೇಜನ ಎನ್ನುವರು.