ಹುಳಿಯಾರು :
ರಾತ್ರಿ ಸುರಿದ ಮಳೆಗೆ ಕಂದಿಕೆರೆ ಗ್ರಾಮದ ಶ್ರೀಮೃಂದಾದೇವಿ, ಮಲ್ಲಿಕಾರ್ಜುನಸ್ವಾಮಿ ಗುಡಿ ಗೋಪುರ ಕುಸಿದು ಬಿದ್ದಿದೆ.
ಈ ದೇವಾಲಯವು ಪಾಳೇಗಾರರ ಹಾಗಲವಾಡಿ ಸಂಸ್ಥಾನದ ಕಾಲದಲ್ಲಿ ನಿರ್ಮಿತವಾಗಿದ್ದು, ಪುರಾತನ ಕಾಲದ ದೇವಾಲಯವಾಗಿದೆ. ಶಿಥಿಲಾವಸ್ಥೆಯಲ್ಲಿದ್ದ ದೇವಸ್ಥಾನವನ್ನು ಕಳೆದ 15 ವರ್ಷದ ಹಿಂದೆ ಗ್ರಾಮಸ್ಥರು ಸೇರಿ ಜೀರ್ಣೋದ್ಧಾರ ಮಾಡಿದ್ದರು.
ತಾಲೂಕಿನಲ್ಲಿ ಮಳೆ ಬಾರದಿದ್ದಾಗ ಮಳೆಗಾಗಿ ಈ ದೇವಸ್ಥಾನದಲ್ಲಿ ಕುಂಭಾಭಿಷೇಕ ಮಾಡಿಸುತ್ತಿದ್ದರೆಂದು ಗ್ರಾಮಸ್ಥರು ತಿಳಿಸಿದ್ದಾರೆ.
ರಾತ್ರಿ ಸುರಿದ ಜಡಿ ಮಳೆಗೆ ದೇವಸ್ಥಾನದ ಗೋಪುರ ನೆಲಕ್ಕುರುಳಿದೆ. ಗ್ರಾಮ ದೇವರಾದ ಶ್ರೀಮೃಂದಾದೇವಿ, ಮಲ್ಲಿಕಾರ್ಜುನಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ವಿಮಾನ ಗೋಪುರ ನಿರ್ಮಾಣಕ್ಕೆ ಮುಜುರಾಯಿ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
