ಹುಳಿಯಾರು : ಮೃತದೇಹ ಶೋಧ ಕಾರ್ಯಕ್ಕೆ ಹಿನ್ನೆಡೆ

ಹುಳಿಯಾರು : 

     ಅಂಕಸಂದ್ರ ಅಣೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿರುವ ಬರಕನಹಾಳ್ ಮೂಲದ ಯುವಕ ದಯಾನಂದನ ಕಳೆಬರದ ಶೋಧ ಕಾರ್ಯ ಭಾನುವಾರ ಸಹ ವಿಫಲವಾಗಿದೆ. ತಿಪಟೂರಿನ ವಿಶೇಷ ಮುಳುಗು ತಜ್ಞರನ್ನು ಸಹ ಭಾನುವಾರ ಶೋಧ ಕಾರ್ಯದಲ್ಲಿ ಬಳಸಿಕೊಳ್ಳಲಾಗಿತ್ತು.

     ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸತತ ಪ್ರಯತ್ನ ನಡೆಸಿದರಾದರೂ ಮೃತದೇಹ ಸಿಗಲಿಲ್ಲ. ಅಣೆಯ ಆಳದಲ್ಲಿ ಬಳ್ಳಾರಿ ಜಾಲಿ ಮುಳ್ಳಿನ ಗಿಡಗಳು ಹೇರಳವಾಗಿ ಇರುವುದರಿಂದ ಮುಳುಗು ತಜ್ಞರು ಕೆಳಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಚಿ.ನಾ.ಹಳ್ಳಿ : ಈಜಲು ಹೋಗಿದ್ದ ಯುವಕ ನೀರುಪಾಲು!!

    ಮುಳ್ಳಿನ ಗಿಡಗಳ ಮಧ್ಯೆ ಮೃತದೇಹ ಸಿಲುಕಿಕೊಂಡಿರುವ ಸಾಧ್ಯತೆಯಿದ್ದು, ಸೋಮವಾರವೂ ಸಹ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರಿಸಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap