ತುರುವೇಕೆರೆ
ಬೆಲೆ ಏರಿಕೆಗಳ ನಡುವೆಯೂ ಸಹ ಸಂಪ್ರದಾಯದಂತೆ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬವನ್ನು ಆಚರಿಸುವ ಸಲುವಾಗಿ ಬುಧವಾರ ಪಟ್ಟಣದಲ್ಲಿ ಜನರು ಹಲವು ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡು ಬಂತು.
ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬ ಆಚರಣೆಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಬಾಳೆಹಣ್ಣು ಕೆ.ಜಿ.ಗೆ 80 ರೂ.ನಿಂದ 100 ರೂ, ಹೂವು ಮಾರು 80 ರೂ, ಹಣ್ಣುಗಳು ಕೆಜಿ 150 ರೂ, ನಿಂಬೆ ಹಣ್ಣು 5 ರೂ, ಬೂದುಗುಂಬಳ ಕೆ.ಜಿ. ಗೆ 25 ರಿಂದ 30 ರೂ.ಗಳಿಗೇರಿದ್ದು ಜನತೆ ಕೊಳ್ಳಲು ಹಿಂದು ಮುಂದು ಯೋಚಿಸುವಂತಾಗಿದೆ. ಸಕಾಲಕ್ಕೆ ಮಳೆ ಇಲ್ಲದೆ ಬೇಸತ್ತಿದ್ದ ರೈತರು ಇತ್ತೀಚೆಗಷ್ಟೇ ಸುರಿಯುತ್ತಿರುವ ಅಲ್ಪಸ್ವಲ್ಪ ಮಳೆಯಿಂದ ಬೆಳೆಯಾದರೂ ಕೈ ಸೇರಬಹುದೆಂಬ ಮಹತ್ವಾಕಾಂಕ್ಷೆ ಹೊಂದಿ ಹಬ್ಬ ಆಚರಣೆಗೆ ಮುಂದಾಗಿದ್ದಾರೆ. ಒಟ್ಟಿನಲ್ಲಿ ತಾಲ್ಲೂಕಿನ ಜನತೆ ಸಂಪ್ರದಾಯದಂತೆ ಹಬ್ಬ ಆಚರಿಸುವ ಸಲುವಾಗಿ ಖರೀದಿಯಲ್ಲಿ ಮುಂದಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
