ಕ್ಯಾಂಪಸ್ ಆಧರಿತ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭ

ಬೆಂಗಳೂರು

          ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಸ್ಪರ್ಧಾತ್ಮಕತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಔದ್ಯಮಿಕ ವಲಯಕ್ಕೆ ಆಡಳಿತ ನಿರ್ವಹಣೆ ಪದವೀಧರರ ಅಗತ್ಯತೆ ತೀವ್ರಗೊಂಡಿದ್ದು, ಅಂತಹ ಪದವೀಧರರನ್ನು ತಯಾರು ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ ಐಬಿಎಸ್ ಬ್ಯುಸಿನೆಸ್ ಸ್ಕೂಲ್ ಎರಡು ವರ್ಷಗಳ ಕ್ಯಾಂಪಸ್ ಆಧರಿತ ಸ್ನಾತಕೋತ್ತರ ಪದವಿ [ಪಿಜಿಪಿಎಂ] ಕೋರ್ಸ್ ಆರಂಭಿಸಿದೆ.

         ಆಧುನಿಕ ಜಗತ್ತಿನ ಔದ್ಯಮಿಕ ವಲಯ ತಮ್ಮ ಪ್ರಮುಖ ಸಂಸ್ಥೆಗಳಿಗೆ ಆಡಳಿತ ನಿರ್ವಹಣೆ ಪದವೀಧರರನ್ನು ನೇಮಿಸಿಕೊಳ್ಳುವ ಜಾಣತನ ಪ್ರದರ್ಶಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ವಾಂಗೀಣ ಆಡಳಿತ ನಿರ್ವಹಣೆ ಮಾಡುವ ಪದವೀಧರರಿಗೆ ಇದೀಗ ಭಾರೀ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಕ್ಯಾಂಪಸ್ ಆಧರಿತ ಸ್ನಾತಕೋತ್ತರ ಕೋರ್ಸ್‍ಗೆ ಇದೀಗ ಭಾರೀ ಬೇಡಿಕೆ ಕಂಡು ಬಂದಿದೆ.

        ಬೆಂಗಳೂರಿನ ಐಬಿಎಸ್ ಕ್ಯಾಂಪಸ್ ಮುಖ್ಯಸ್ಥರು ಮತ್ತು ನಿರ್ದೇಶಕರಾದ ಪ್ರೋ: ಜಿ.ವಿ. ಮುರಳಿಧರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಕೋರ್ಸ್‍ನಲ್ಲಿ ನಿರಂತರ ಕಲಿಕೆಯಿಂದ ತಮ್ಮ ಸಾಮಥ್ರ್ಯ ಮತ್ತು ಕೌಶಲ್ಯ ಹೆಚ್ಚಳಕ್ಕೆ ಐಬಿಎಸ್ ಬ್ಯುಸಿನೆಸ್ ಸ್ಕೂಲ್ ಒತ್ತು ನೀಡುತ್ತಿದೆ. ಔದ್ಯಮಿಕ ವಲಯದಲ್ಲಿ ಸೇವೆ ಸಲ್ಲಿಸಲು ತಮ್ಮ ವಿದ್ಯಾರ್ಥಿಗಳನ್ನು ಅಗತ್ಯಕ್ಕೆ ತಕ್ಕಂತೆ ಸಜ್ಜುಗೊಳಿಸುತ್ತಿದೆ. ಇದರ ಪರಿಣಾಮ ಕಳೆದ ಕೆಲ ವರ್ಷಗಳಲ್ಲಿ ಅತ್ಯುತ್ತಮ ರೀತಿಯಲ್ಲಿ ಉದ್ಯೋಗಾವಕಾಶಗಳು ಸಹ ದೊರೆತಿವೆ ಎಂದರು.

        ಸಂಸ್ಥೆಯಲ್ಲಿ ಪ್ರಮುಖವಾಗಿ ಅತ್ಯುತ್ತಮವಾದ ಬದ್ಧತೆಯುಳ್ಳ ಬೋಧಕ ಸಿಬ್ಬಂದಿ, ಸಮಕಾಲೀನ ಪಠ್ಯಕ್ರಮ. ಕಲಿಕೆಯ ವಿಧಾನ, ರಾಷ್ಟ್ರೀಯ ಹಿತಾಸಕ್ತಿ, ಬಲಿಷ್ಠ ಕೈಗಾರಿಕಾ ಜಾಲವನ್ನು ಸೃಷ್ಟಿಸಲಾಗಿದೆ. ಇಂತಹ ವಾತಾವರಣದಲ್ಲಿ ಕಲಿಕೆಯ ವಿಧಾನಗಳಲ್ಲಾದ ಬದಲಾವಣೆಗಳಿಂದಾಗಿ ವಿದ್ಯಾರ್ಥಿ ಸಮುದಾಯದಲ್ಲಿ ವಿಶ್ವಾಸ ಮೂಡಿದೆ. “ ಇಂತಹ ಕಲಿಕೆಯ ಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ನಿರ್ಧಾರ ಕೈಗೊಳ್ಳುವ ಮತ್ತು ವಿಶ್ಲೇಷಣೆ ಮಾಡುವ ಕೌಶಲ್ಯ ಬೆಳೆಯುತ್ತಿದೆ. ಪರ್ಯಾಗಳನ್ನು ರೂಪಿಸುವ ಮತ್ತು ಮೌಲ್ಯ ಮಾಪನ ಮಾಡುವ ಶಕ್ತಿ ವೃದ್ಧಿಸುತ್ತದೆ ಎಂದರು.

        ಕೈಗಾರಿಕೆಗಳ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಸಂಸ್ಥೆ ಕಾರ್ಯೋನ್ಮುಖವಾಗಿದ್ದು, ಜ್ಞಾನಾಧಾರಿತ ಕೌಶಲ್ಯ ಮನೋಧೋರಣೆ ಸೃಷ್ಟಿಸುವುದು ಸಂಸ್ಥೆಯ ಆದ್ಯತೆಯಾಗಿದೆ. ಕೈಗಾರಿಕಾ ವೃತ್ತಿಪರರು, ಹಳೆಯ ವಿದ್ಯಾರ್ಥಿಗಳು ಮತ್ತು ಬಾಹ್ಯ ಚಿಂತನೆಯುಳ್ಳ ನಾಯಕರೊಂದಿಗೆ ನಿರಂತರ ಸಂವಾದ ನಡೆಸಲು ವೇದಿಕೆ ಸೃಷ್ಟಿಸಲಾಗಿದೆ. ಇದರಿಂದ ಸೂಕ್ತ ದಾರಿಯನ್ನು ಆಯ್ಕೆ ಮಾಡಿಕೊಳ್ಳುವ ಜತೆಗೆ ಜೀವನ ಮನೋಧೋರಣೆಯನ್ನು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಎರಡು ವರ್ಷಗಳ ಕೋರ್ಸ್‍ನಿಂದಾಗಿ ಪದವಿಧರರು ಸೂಕ್ತ ಜೀವನ ಕೌಶಲ್ಯವನ್ನು ಅಳವಡಿಸಿಕೊಂಡು ಜೀವನ ಪೂರ್ತಿ ಕಲಿಯುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾರೆ ಎಂದರು.

       ಶಿಕ್ಷಣ ಸಂಸ್ಥೆಯ ಉಪ ನಿರ್ದೇಶಕ ಮತ್ತು ಶೈಕ್ಷಣಿಕ ಸಂಯೋಜಕ ಪ್ರೊ: ಆರ್. ಹರೀಶ್ ಮಾತನಾಡಿ, ಎಲ್ಲಾ ರೀತಿಯಲ್ಲೂ ವ್ಯಕ್ತಿತ್ವ ವಿಕಸನಕ್ಕೆ ಈ ಕೋರ್ಸ್ ಸಹಕಾರಿಯಾಗಲಿದೆ. ಸಂಪರ್ಕದ ಕುಶಲತೆ ಹೆಚ್ಚಿಸುವ ಕಾರ್ಯಾಗಾರಗಳು, ಪ್ರಾತ್ಯಕ್ಷಿಕೆ, ವಿಚಾರ ಸಂಕಿರಣ, ಅತಿಥಿಗಳಿಂದ ಉಪನ್ಯಾಸ, ನಿರಂತರವಾಗಿ ಯೋಜನಾ ವರದಿ ಸಿದ್ಧಪಡಿಸುವುದು ಸೇರಿ ರಚನಾತ್ಮಕ ಶೈಕ್ಷಣಿಕ ಕ್ರಮಗಳಿಂದಾಗಿ ನಾವು ಏನಾದರೂ ಸಾಧಿಸಬಹುದು ಎನ್ನುವ ವಿಶ್ವಾಸ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ. ಇದರ ಜತೆಗೆ ವೈವಿಧ್ಯಮಯವಾದ ಪಠ್ಯೇತರ, ಸಹಪಠ್ಯ ಕಾರ್ಯಕ್ರಮಗಳಿಂದ ನಾಯಕತ್ವ ಬೆಳೆಯಲು, ತಂಡದಲ್ಲಿ ಕಾರ್ಯನಿರ್ವಹಿಸುವ ಮತ್ತು ಸಾಂಸ್ಥಿಕ ಕೌಶಲ್ಯ ಬೆಳೆಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

        ಪ್ಲೇಸ್‍ಮೆಂಟ್ ವಿಭಾಗದ ಡೀನ್ ಪ್ರೊ: ಜೆ. ವೆಂಕಟರಾಮನ್ ಮಾತನಾಡಿ, ಹಲವಾರು ಈ ಕೋರ್ಸ್‍ನಲ್ಲಿ “ ಕೈಗಾರಿಕಾ ಒಳನೋಟಗಳು” ಇವೆ. ಕೈಗಾರಿಕೆಗಳಿಗೆ ಭೇಟಿ ನೀಡುವುದು, ಹಿರಿಯ ಪ್ರಾಧ್ಯಾಪಕರ ಜತೆ ಆಗಾಗ್ಗೆ ಸಂವಾದ ನಡೆಸುವ ಕ್ರಮಗಳಿಂದ ಕಾಲೇಜು ಹಂತದಲ್ಲೇ ವ್ಯವಹಾರ ಪ್ರಕ್ರಿಯೆಯಲ್ಲಿ ನೇರವಾದ ಜ್ಞಾನ ಸಂಪಾದಿಸಲು ವೇದಿಕೆ ಸಜ್ಜುಗೋಲಿಸಲಗಿದೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link