ಪೋಷಕರ ವರ್ತನೆಗೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ…!!!

ಬೆಂಗಳೂರು

      ವ್ಯಾಸಂಗ ಮಾಡಲು ಇಷ್ಟವಿಲ್ಲದ ಕೋರ್ಸ್‍ಗೆ ಸೇರಿಸಿದ್ದ ಪೋಷಕರ ವರ್ತನೆಯಿಂದ ಬೇಸತ್ತು ಮಾನಸಿಕ ಖಿನ್ನತೆಗೊಳಗಾಗಿದ್ದ ಭೂತಾನ್ ವಿದ್ಯಾರ್ಥಿನಿಯೊಬ್ಬರು ನೇಣಿಗೆ ಶರಣಾಗಿರುವ ಧಾರುಣ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆಚಾರ್ಯ ಕಾಲೇಜಿನ ಕಾಟೇಜ್‍ನಲ್ಲಿ ನಡೆದಿದೆ.

      ಭೂತಾನ್‍ನ ಕರ್ಮಿದೇಮಾ (20)ಎಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಗುರುತಿಸಲಾಗಿದೆ.ಆಚಾರ್ಯ ಕಾಲೇಜಿನಲ್ಲಿ ಇಂಟೀರಿಯರ್ ಡಿಸೈನ್ (ಒಳಾಂಗಣ ವಿನ್ಯಾಸ) ಕೋರ್ಸ್‍ನ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿ ಕರ್ಮಿದೇಮಾ ವ್ಯಾಸಂಗ ಮಾಡುತ್ತಿದ್ದರು.

      ಕಾಲೇಜಿನ ಆವರಣದ ಕಾಟೇಜ್‍ನಲ್ಲಿಯೇ ವಾಸಿಸುತ್ತಿದ್ದ ಕರ್ಮಿದೇಮಾ ಗುರುವಾರ ಮಧ್ಯಾಹ್ನ 1ರ ವೇಳೆ ಸ್ನೇಹಿತೆ ಕಾಲೇಜಿನಿಂದ ಬರುವ ಮುನ್ನವೇ ಕಾಟೇಜ್‍ಗೆ ಬಂದು ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕರ್ಮಿದೇಮಾಗೆ ಪತ್ರಿಕೋದ್ಯಮ ಪದವಿ ಓದಲು ಇಷ್ಟವಿದ್ದು, ತಂದೆ – ತಾಯಿಗಳು ಒಪ್ಪದೆ, ಇಂಟೀರಿಯರ್ ಡಿಸೈನ್ ಕೋರ್ಸ್‍ಗೆ ಸೇರಿಸಿದ್ದರು. ಇದರಿಂದ ನೊಂದಿದ್ದ ಆಕೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಅದರಿಂದಲೇ ನೇಣಿಗೆ ಶರಣಾಗಿದ್ದಾರೆ ಎಂದು ಪ್ರಕರಣ ದಾಖಲಿಸಿರುವ ಸೋಲದೇವನಹಳ್ಳಿ ಪೊಲೀಸರು ಶಂಕಿಸಿದ್ದಾರೆ.

        ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಭೂತಾನ್‍ಗೆ ಕಳುಹಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link