ಮೇಲ್ಸೇತುವೆ ಕಾಮಗಾರಿ: ಕೆಳಭಾಗದ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ

ಬೆಂಗಳೂರು

       ಕೆಆರ್ ಮಾರುಕಟ್ಟೆಯ ನಗರದ ಮೊದಲ ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆ ರಸ್ತೆ ಕಾಮಗಾರಿಯನ್ನು ಭಾನುವಾರದಿಂದ ಆರಂಭಿಸಿ ಮೇಲ್ಸುತುವೆಯ ಒಂದು ಭಾಗದಲ್ಲಿ ಸಂಚಾರ ನಿಷೇಧಿಸಿರುವುದರಿಂದ ಕೆಳಭಾಘದ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿದೆ.

       ಭಾನುವಾರ ರಜೆ ದಿನವಾಗಿರುವುದರಿಂದ ಹೆಚ್ಚನ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿಲ್ಲ ಸೋಮವಾರದಿಂದ ಅದರ ಬಿಸಿಯನ್ನು ವಾಹನ ಚಾಲಕರು ಅನುಭವಿಸಬೇಕಾಗಿದ್ದು ಪ್ರತ್ಯೇಕ ರಸ್ತೆಗಳಿಗೆ ಮಾರು ಹೋಗಿದ್ದಾರೆ.

       ಕಳೆದ ಹಲವಾರು ವರ್ಷಗಳಿಂದಲೂ ದಿನನಿತ್ಯ ಸಾವಿರಾರೂ ವಾಹನಗಳು ಈ ಮೇಲ್ಸುತುವೆಯ ಮೇಲೆ ಓಡಾಡುತ್ತಿದ್ದ ಕಾರಣ ರಸ್ತೆಯ ಡಾಂಬರ್ ಕಿತ್ತುಹೋಗಿದ್ದು ಹಿನ್ನೆಲೆ ಸಂಚಾರ ನಿಷೇಧಿಸಿ ಕಾಮಗಾರಿ ಆರಂಭಿಸಲಾಗಿದೆ.

       ದುರಸ್ಥಿ ಕಾಮಗಾರಿಯನ್ನು ಬಿಬಿಎಂಪಿ ತ್ರಿಶಾ ಇನ್‍ಪ್ರಾ ಕಂಪನಿಗೆ ನೀಡಿದ್ದು 40 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಕಂಪನಿ ಹೇಳಿದ್ದು 30 ದಿನಗಳೊಳಗೆ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.

        ಮೇಲ್ಸುತುವೆ ರಸ್ತೆಯ ಡಾಂಬರಿನ ಮೇಲ್ಪದರ ಕಿತ್ತುಹೋಗಿದ್ದು ಮೂರು ಎಂ ಎಂ ದಪ್ಪದ ಡಾಂಬರ್ ಹಾಕಿ ನಂತರ 40 ಎಂ ಎಂ ದಪ್ಪದ ಡಾಂಬರ್ ಹಾಕಲು ಸೂಚಿಸಲಾಗಿದೆ.

         ಆಗ ನಂತರ ಯಾವುದೇ ಸಮಸ್ಯೆಯಿಲ್ಲದೆ 5 ವರ್ಷಗಳ ಕಾಲ ರಸ್ತೆಯಲ್ಲಿ ಬಳಸಬಹುದಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಮೇಲ್ಸುತುವೆ ಕಾಮಗಾರಿಯಿಂದ ವಾಹನಗಳಿಗೆ ಬದಲಿ ಸಂಚಾರ ವ್ಯವಸ್ಥೆ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಕೆಳಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಕಾಮಗಾರಿ ವೇಳೆಯ ಸಹ ಸೇತುವೆ ಮೇಲ್ಭಾಗದ ಒಂದು ಬದಿಯ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶಕ್ಕೆ ಕಲ್ಪಿಸಲಾಗುವುದು.

        ಬೆಳಿಗ್ಗೆ 5 ರಿಂದ 3 ರವರೆಗೆ ಟೌನ್‍ಹಾಲ್ ಕಡೆಗೆ ಬರುವ ವಾಹನಗಳಿಗೆ ಮತ್ತು ಸಂಜೆ 3ರ ಬಳಿಕ ಮೈಸೂರು ಕಡೆಗೆ ತೆರಳಲು ವಾಹನಗಳಿಗೆ ಅನುಕೂಲ ಮಾಡಿಕೊಡಲಾಗುವುದು. ಈ ಹಿಂದೆ ಮೈಸೂರು ರಸ್ತೆಯಲ್ಲಿಯೂ ವೈಟ್‍ಟ್ಯಾಪಿಂಗ್ ಕಾಮಗಾರಿಯಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಈ ನಿಟ್ಟಿನಲ್ಲಿ ಸಾಧ್ಯವಾದ ಮಟ್ಟಕ್ಕೆ ಸಂಚಾರ ದಟ್ಟಣೆ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link