ಹೊನ್ನವಳ್ಳಿ :
ತಾಲ್ಲೂಕಿನ ಹೊನ್ನವಳ್ಳಿ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಆಯ್ಕೆಯಾಗಿದ್ದಲ್ಲದೇ ಅಧಿಕಾರ ಮತ್ತು ಇತರ ಸವಲತ್ತುಗಳನ್ನು ಬಳಸಿಕೊಂಡಿರುವ ಗೀತಾ ಕೋಂ ರವಿಕುಮಾರ್ ವಿರುದ್ದ ತಿಪಟೂರು ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ಗೆ ಎಸ್.ಸಿ ಜನಾಂಗದವರು ದೂರನ್ನು ಸಲ್ಲಿಸಿದ್ದಾರೆ.
ತಾಲ್ಲೂಕಿನ ಹೊನ್ನವಳ್ಳಿಯ ಗ್ರಾಮ ಪಂಚಾಯಿತಿಯ ಸದಸ್ಯೆಯಾದ ಗೀತಾ ಕೋಂ ರವಿಕುಮಾರ್ ಮೂಲತಹ ಹೊನ್ನವಳ್ಳಿ ಗ್ರಾಮದವರಾಗಿದ್ದು ಕಳೆದ ಬಾರಿ ಗ್ರಾಮಪಂಚಾಯಿತಿ ಚುನಾವಣೆಗೆ ಸ್ಫರ್ಧಿಸಲು ನಾನು ಶಿಳ್ಳೆಕ್ಯಾತ (ಪರಿಶಿಷ್ಟಜಾತಿ) ಜನಾಂಗಕ್ಕೆ ಸೇರಿದವರು ಎಂದು ಹೇಳಲು, ನಾನು ವಿದ್ಯಾಭ್ಯಾಸ ಮಾಡಿಲ್ಲ ಅದಕ್ಕಾಗಿ ನನ್ನ ಮಗಳ ಶಾಲಾ ದಾಖಲಾತಿಯನ್ನು ನೀಡುತ್ತಿದ್ದು ನನಗೆ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಆದರೆಇವರು 49/93-94ರಲ್ಲಿ ದಿನಾಂಕ 09-06-1993ರಲ್ಲಿ 8ೀ ತರಗತಿಗೆ ಸರ್ಕಾರಿ ಪದವಿ ಪೂರ್ವಕಾಲೇಜು (ಪ್ರೌಢಶಾಲಾ ವಿಭಾಗ) ಹೊನ್ನವಳ್ಳಿ ತಿಪಟೂರು ತಾಲ್ಲೂಕಿನಲ್ಲಿ ದಾಖಲಾಗಿದ್ದಾರೆ ಮತ್ತು ಇದರಲ್ಲಿ ತನ್ನ ಗೀತಾ ಬಿನ್ ಚಂದ್ರೋಜಿರಾವ್ ಇವರು ಹಿಂದೂ ಮರಾಠಿ ಜನಾಂಗಕ್ಕೆ ಸೇರಿದವರಾಗಿದ್ದರೆಂದು ನಮೂದಿಸಲಾಗಿದೆ ಚುನಾವಣೆಗೆ ಸ್ಪರ್ಧಿಸುವಾಗ ಹೇಗೆ ಜಾತಿ ಬದಲಾಗಿದೆ ಎಂದು ದೂರುದಾರರು ಪ್ರಶ್ನಿಸಿದ್ದಾರೆ.
ಗೀತಾ ಕೋಂ ರವಿಕುಮಾರ್ ಆದ ಈಕೆಯು ಸುಳ್ಳು ದಾಖಲಾತಿಗಳನ್ನು ನೀಡಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು ಪಡೆದುಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದು ಮತ್ತೆ ಈ ಬಾರಿಯ ಚುನಾವಣೆಗೆ ಇದೇ ಸುಳ್ಳು ದಾಖಲೆಗಳನ್ನು ಇಟ್ಟುಕೊಂಡು ಗ್ರಾಮ ಪಂಚಾಯಿತಿ ಸ್ಪರ್ಧಿಸಲು ಮುಂದಾಗಿರುತ್ತಾರೆ. ಆದ್ದರಿಂದ ಈ ದಾಖಲೆಗಳನ್ನು ಪರಿಶೀಲಿಸಿ ದಾಖಲೆಗಳನ್ನು ಪರಿಶೀಲಿಸದೇ ಸ್ಥಳ ಪರಿಶೀಲನೆ ಮಾಡದೇ ಜಾತಿ ಪ್ರಮಾಣ ಪತ್ರವನ್ನು ಹೇಗೆ ಕೊಟ್ಟರು ಹಾಗೂ ಸರ್ಕಾರದಿಂದ ಮತ್ತು ಗ್ರಾಮ ಪಂಚಾಯಿತಿಯಿಂದ ಪಡೆದಿರುವ ಸವಲತ್ತುಗಳನ್ನು, ಎಸ್.ಸಿ ಜನಾಂಗಕ್ಕೆ ನೀಡುವ ಸವಲತ್ತುಗಳನ್ನು ಪಡೆದುಕೊಂಡಿದ್ದ ಇವರ ಮೇಲೆ ಕ್ರಿಮಿಸಲ್ ಕೇಸ್ ದಾಖಲಿಸಿ, ಕಾನೂನು ರೀತಿಕ್ರಮ ಕೈಗೊಳ್ಳಬೇಕೆಂದು ಎಸ್.ಸಿ ಜನಾಂಗದವರಾದ ಜಯಣ್ಣ, ಪರಶುರಾಮಯ್ಯ, ಪುಟ್ಟಸ್ವಾಮಿ, ಪ್ರವೀಣ್ಕುಮಾರ್, ಪ್ರದೀಪ್, ಬಸವರಾಜು ಮುಂತಾದವರು ಉಪವಿಭಾಗಾಧಿಕಾರಿಗಳಿಗೆ, ತಹಸೀಲ್ದಾರ್ರಿಗೆ ದೂರನ್ನು ಸಲ್ಲಿಸಿದ್ದು ಇದು ಈ ಬಾರಿಯ ಚುನಾವಣೆಗೆ ಒಂದು ಮಾದರಿಯಾಗಲಿ ಎಂದು ತಿಳಿಸಿದ್ದಾರೆ.+
