ಶ್ರೀನಗರ: 

ವಿಶ್ವದ ಅತ್ಯಂತ ಕ್ರೂರಿ ಭಯೋತ್ಪಾದನಾ ಸಂಸ್ಥೆಯಾದ ಐಎಸ್ ಉಗ್ರ ಸಂಘಟನೆಯ ಪ್ರಚೋದನಾಕಾರಿ ಸಿದ್ಧಾಂತಗಳಿಗೆ ಪ್ರೇರಿತರಾಗಬೇಡಿ ಎಂದು ಕಾಶ್ಮೀರದ ಯುವ ಜನತೆಗೆ ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರು ಬುದ್ಧಿವಾದ ಹೇಳಿದ್ದಾರೆ.
ನಗರದ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಮಾತನಾಡಿದ ಪ್ರತ್ಯೇಕತವಾದಿ ನಾಯಕರಾದ ಮಿರ್ವೈಜ್ ಉಮರ್ ಫಾರೂಖ್, ಮೊಹಮ್ಮದ್ ಯಾಸಿನ್ ಮಲಿಕ್ ಮತ್ತು ಇತರೆ ನಾಯಕರು, ನಮ್ಮ ಸಿದ್ಧಾಂತಕ್ಕೂ ಅವರ ಸಿದ್ಧಾಂತಕ್ಕೂ ಅಜಗಜಾಂತರ ವ್ಯತ್ಯಾಸವಿದ್ದು ನೀವು ನಿಮ್ಮ ಮೂಲ್ಯವಾದ ಜೀವನವನ್ನು ಕಳೆದುಕೊಳ್ಳಬೇಡಿ ಎಂದು ಕಿವಿ ಮಾತು ಹೇಳಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
